ಮಧ್ಯರಾತ್ರಿ ಜಾರಿದ ಆಗುಂಬೆ ಗುಡ್ಡ
ರಸ್ತೆ ವಿಸ್ತರಣೆ ಕಾಮಗಾರಿಗೆ ಘಾಟಿ ಬಲಿ?
ಆಗುಂಬೆ ಘಾಟಿಯ 4 ಮತ್ತು 5 ನೇ ತಿರುವಿನಲ್ಲಿ ಮಧ್ಯರಾತ್ರಿ 1.30ಕ್ಕೆ ಸಣ್ಣ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿದೆ. ರಾತ್ರಿ ಆಗುಂಬೆ ಮತ್ತು ಹೆಬ್ರಿ ಪೊಲೀಸರು ವಾಹನಗಳಿಗೆ ಬದಲಿ ಮಾರ್ಗಗಳನ್ನು ಸೂಚಿಸಿ ಸವಾರರಿಗೆ ಸಹಕರಿಸಿದ್ದಾರೆ.
ಮುಂಜಾನೆ ಮೊದಲ ಬಸ್ ಸಣ್ಣ ಗುಡ್ಡ ಜಾರಿದ ಪ್ರದೇಶದಲ್ಲಿ ಮುನ್ನುಗ್ಗಿದ್ದರಿಂದ ತಕ್ಕಮಟ್ಟಿಗಿನ ವಾಹನ ಸಂಚಾರ ಆರಂಭವಾಗಿದ್ದು ಭಾರಿ ಮಳೆ ಆಗಮಿಸಿದರೆ ಮತ್ತಷ್ಟು ಗುಡ್ಡ ಜರುಗುವ ಆತಂಕ ಎದುರಾಗಿದೆ.
ಕಳೆದ ವರ್ಷ ಘಾಟಿಯ 7ನೇ ತಿರುವಿನಲ್ಲಿ ಭಾರೀ ಪ್ರಮಾಣ ಗುಡ್ಡ ಕುಸಿತಗೊಂಡಿದ್ದರಿಂದ ವಾರಗಳ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ಭಾರಿಯ ಗುಡ್ಡ ಕುಸಿತ ಕೂಡ ಸಂಚಾರ ಸ್ಥಗಿತ ಮರಕಳಿಸುವ ಮುನ್ಸೂಚನೆ ನೀಡಿದೆ.
ತೀರ್ಥಹಳ್ಳಿ ತಾಲ್ಲೂಕಿಗೆ ಆಗುಂಬೆ ಮತ್ತು ಅದರ ಕೆಲ ಘಾಟಿಯ ತಿರುವುಗಳು ಸೇರಿರುವುದರಿಂದ ದೇಶದಲ್ಲಿಗೆ ತೀರ್ಥಹಳ್ಳಿಗೆ ವಿಶೇಷವಾದ ಸ್ಥಾನ ಕಲ್ಪಿಸಲಾಗಿದೆ. ಯುನೆಸ್ಕೋ ಪಟ್ಟಿಯಲ್ಲಿ ಆಗುಂಬೆ ಗೋಚರಗೊಂಡಿದ್ದು ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಿಸಿದೆ. ಇನ್ನು ಆಗಮಿಸುವರ ಅನುಕೂಲಕ್ಕೆ ಮತ್ತು ಮಂಗಳೂರು, ಮಲ್ಪೆ ಬಂದರುಗಳಿಂದ ಆಗಮಿಸುವ ವಿವಿಧ ಕಾರ್ಖಾನೆ ಕಚ್ಚಾ ಸಾಮಗ್ರಿ ಸಾಗಿಸುವ ಕಾರ್ಪೊರೇಟ್ ಕೇಂದ್ರಿತ ಅಭಿವೃದ್ಧಿಗೆ ಘಾಟಿ ವಿಸ್ತರಣೆ ಅಗತ್ಯವಾಗಿದೆ. ಈ ಉದ್ದೇಶದಿಂದಲೇ ಆಗುಂಬೆ ಘಾಟಿಯಲ್ಲಿ ಚತುಷ್ಪತ ಸುರಂಗ ಮಾರ್ಗದ ಪ್ರಸ್ತಾವನೆ ಜಾರಿಗೆ ತರಲಾಗಿದೆ. ಮುಂದೊಂದು ದಿನ ಕೊಡಗಿನಲ್ಲಿ ಸಂಭವಿಸಿದ ಭೂ ಕುಸಿತ ತೀರ್ಥಹಳ್ಳಿಯಲ್ಲಿ ಸಂಭವಿಸಿದರೂ ಅಚ್ಚರಿ ಪಡಬೇಕಿಲ್ಲ.