ಕಾಂಗ್ರೆಸ್ ಭದ್ರಕೋಟೆಯನ್ನು
ಛಿದ್ರ ಮಾಡಿದ ಬಿಜೆಪಿ
ತಾಲ್ಲೂಕಿನಲ್ಲಿಯೇ
ಶೇಕಡಾ 63% ಮತ ಬಿಜೆಪಿ ಪಾಲು
ಬಿಜೆಪಿಯ ಶಿವಮೊಗ್ಗ
ಲೋಕಸಭಾ ಅಭ್ಯರ್ಥಿ ಭರ್ಜರಿಯಾಗಿ ತಮ್ಮ ಸಮೀಪದ ಎದುರಾಳಿ ಕಾಂಗ್ರೆಸ್ನ ಗೀತಾ ಶಿವರಾಜಕುಮಾರ್ ಅವರನ್ನು
ಸೋಲಿಸಿ ಸತತ ನಾಲ್ಕನೆ ಬಾರಿ ಸಂಸತ್ ಪ್ರವೇಶಿಸುತ್ತಿದ್ದಾರೆ. ಬಹುತೇಕ ಶಿವಮೊಗ್ಗ ಜಿಲ್ಲೆಯ ಎಲ್ಲಾ
ಕಡೆ ರಾಘವೇಂದ್ರ ಕಾಂಗ್ರೆಸ್ಗಿಂತಲೂ ಅಧಿಕ ಮತ ಪಡೆದುಕೊಂಡಿದ್ದಾರೆ.
ತೀರ್ಥಹಳ್ಳಿಯ ಮಟ್ಟಿಗೆ
ಈ ಬಾರಿ ಕುಪ್ಪಳಿ ಮತ ಕ್ಷೇತ್ರ ಬಿಜೆಪಿ ವರಿಷ್ಠರ ಗಮನ ಸೆಳೆದಿದೆ. ಕಾರಣ ಇಲ್ಲಿಯ ತನಕ ಕಾಂಗ್ರೆಸ್ನ
ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದ ಕುಪ್ಪಳಿಯಲ್ಲಿ ಈ ಬಾರಿ ಬಿ.ವೈ.ರಾಘವೇಂದ್ರ ಒಟ್ಟಾರೆ
11,913 ಮತಗಳನ್ನು ಪಡೆದಿರುವುದಲ್ಲದೇ ಕಾಂಗ್ರೆಸ್ ವಿರುದ್ಧ 5,975 ಮತಗಳ ಭರ್ಜರಿ ಲೀಡ್ ಗಳಿಸಿದ್ದಾರೆ.
ಇದು ತೀರ್ಥಹಳ್ಳಿಯಲ್ಲೇ ಅತೀ ಹೆಚ್ಚಿನ ಲೀಡ್ ಆಗಿ ದಾಖಲಾಗಿದೆ. ವಿಶೇಷವೆಂದರೆ ಕುಪ್ಪಳಿ ಕ್ಷೇತ್ರದ
ಒಟ್ಟು 30 ಬೂತ್ಗಳಲ್ಲಿ ಬಿಜೆಪಿ 29ರಲ್ಲಿ ಪ್ರಚಂಡ ಮುನ್ನಡೆ ಪಡೆದುಕೊಂಡಿದೆ. ಇದಲ್ಲದೇ ಒಟ್ಟಾರೆ
ಮತದಾನದಲ್ಲಿ ಶೇಕಡಾ 63ರಷ್ಟು ಪ್ರಮಾಣದ ಮತವನ್ನು ಪಡೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ದಂಗಾಗುವಂತೆ
ಮಾಡಿದ್ದಾರೆ.
ವಾಸ್ತವವಾಗಿ ಕಾಂಗ್ರೆಸ್
ಸರ್ಕಾರದ ಜನಪ್ರಿಯ ಯೋಜನೆಗಳಾದ ಪಂಚ ಗ್ಯಾರಂಟಿ ಮತ್ತು ಈ ಬಾರಿ ಕುಟುಂಬದ ಮಹಿಳೆಗೆ 1 ಲಕ್ಷ ರೂಪಾಯಿಗಳ
ಗ್ಯಾರಂಟಿ ಭರವಸೆಯನ್ನು ಮೀರಿ ಈ ಪ್ರಮಾಣದ ಮತ ಗಳಿಕೆ ಆಗಿರುವುದು ಬಿಜೆಪಿ ಪಕ್ಷದ ಸಿದ್ಧಾಂತ ಬಿ.ವೈ.
ರಾಘವೇಂದ್ರರ ಅಭಿವೃದ್ಧಿ ಪರ ಹಾಗೂ ಆರಗ ಜ್ಞಾನೇಂದ್ರರ ಜನಪರ ರಾಜಕಾರಣಕ್ಕೆ ದೊರೆತ ದಿಗ್ವಿಜಯ ಎಂದು
ಕುಪ್ಪಳಿ ಶಕ್ತಿ ಕೇಂದ್ರದ ಅಧ್ಯಕ್ಷ ವಾಸುದೇವ್ ಹಾರೋಗೊಳಿಗೆ, ಪ್ರಧಾನ ಕಾರ್ಯದರ್ಶಿಗಳಾದ ಪಿ.ಅಣ್ಣಪ್ಪ
ಹಾಗೂ ನಟರಾಜ್ ಹುಲ್ಕುಳಿ ತಿಳಿಸಿದ್ದು ಈ ಮಟ್ಟಿನ ದಾಖಲೆ ಪ್ರಮಾಣದ ಮುನ್ನಡೆಗಾಗಿ ಶ್ರಮಿಸಿದ ಬಿಜೆಪಿ
ಪಕ್ಷದ ಪ್ರತಿಯೊಬ್ಬರನ್ನು ಅಭಿನಂದಿಸಿದ್ದು ಮತದಾರರಿಗೆ ಹಾರ್ದಿಕ ಕೃತಜ್ಞತೆಗಳನ್ನು ತಿಳಿಸಿದ್ದಾರೆ.