ಸುದರ್ಶನ್ ಉಡುಪರಿಂದ ನಾಗ ಸಂದರ್ಶನ
ವಿವಿಧ ಧಾರ್ಮಿಕ ಕಾರ್ಯಕ್ರಮ, ಸಾರ್ವಜನಿಕ ಅನ್ನ ಸಂತರ್ಪಣೆ
ಶ್ರೀ ಕ್ಷೇತ್ರ ಜಯಪುರದಲ್ಲಿ ಇರತಕ್ಕಂಹ ಸಪರಿವಾರ ನಾಗದೇವರ 15ನೇ ವರ್ಷದ ವರ್ಧಂತ್ಯೋವವನ್ನು ಮಾಡಲಾಗುವುದು. ಆಪ್ರಯುಕ್ತ ಬೆಳಿಗ್ಗೆ ಗಂಟೆ 9-00 ರಿಂದ ಗಣಪತಿ ಪೂಜೆ ಮಾಸ್ತಿಗೆ ದುರ್ಗಾಹೋಮ, ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ನಾಗ-ನಾಗಯಕ್ಷಿಗೆ ಅಷ್ಟೋತರ ಪರಿಕಲಶ ಸಹಿತ ಪ್ರಧಾನ ಬ್ರಹ್ಮಕುಂಭ ಸ್ಥಾಪನಾ ಅದಿವಾಸಹೋಮ, ಬ್ರಹ್ಮ ಕಲಶಾಭಿಷೇಕ ಮಹಾಪೂಜೆ, ನಾಗ ಸಂದರ್ಶನ ಹಾಗೂ ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗವಿರುತ್ತದೆ. ಸುದರ್ಶನ್ ಉಡುಪ ಇವರಿಂದ ನಾಗ ಸಂದರ್ಶನ ಇರುತ್ತದೆ.
ಮಧ್ಯಾಹ್ನ 1-00 ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ ಇರುತ್ತದೆ.
ಇದೇ ದಿನ ಸಂಜೆ ಸರ್ವಪ್ರಾಯಶ್ಚಿತ ಆಶ್ಲೇಷಬಲಿ, ಉದ್ಯಾಪನಹೋಮ, ಮಹಾಪೂಜೆ ಮತ್ತು ಪ್ರಸಾದ ವಿತರಣೆ ಈ ಕಾರ್ಯಕ್ರಮದ ಆಚಾರ್ಯತ್ವವನ್ನು ಶ್ರೀ ಕ್ಷೇತ್ರ ಮಂದಾರ್ತಿಯ ಆರ್ಚಕರಾದ ವೇ। ಬ್ರ॥ ವೆಂಕಟೇಶ್ ಮಯ್ಯ ಇವರು ನಡೆಸಿಕೊಡುವವರು.
ಇದೇ ದಿನ ರಾತ್ರಿ 8-30ಕ್ಕೆ ಶ್ರೀ ದೇವರ ಸನ್ನಿಧಿಯಲ್ಲಿ ಶ್ರೀ ಕ್ಷೇತ್ರ ಗೋಳಿಗರಡಿ ಸಾಸ್ತಾನ ಯಕ್ಷಗಾನ ಮೇಳದವರಿಂದ ದಶಾವತಾರ ಯಕ್ಷಗಾನ ಬಯಲಾಟ ಆಡಿ ತೋರಿಸಲಿರುವವರು.
ಈ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ತನು-ಮನ-ಧನ ಸಹಕಾರದೊಂದಿಗೆ ಸಹಕರಿಸಿ ಶ್ರೀ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಕ್ಷೇತ್ರ ಜಯಪುರ ಧರ್ಮದರ್ಶಿಗಳಾದ ರಾಜೇಂದ ಡಿ.ಎಸ್. ಹಾಗೂ ದೇವಸ್ಥಾನದ ಸಮಿತಿ ವಿನಂತಿಸಿಕೊಂಡಿದೆ.
ವಿಶೇಷ ಸೂಚನೆ: ಸಾನಿಧ್ಯದಲ್ಲಿ ಪ್ರತಿ ಅಮವಾಸೆ ಹುಣ್ಣಿಮೆಯೆಂದು ದೇವರ ದರ್ಶನ ವಿದ್ದು ಹೇಳಿಕೆ ಕೇಳಿಕೆ ಇರುತ್ತದೆ. ಮತ್ತು ಎಲ್ಲಾ ದಿನಗಳಂದು ಪ್ರಶ್ನ, ಚಿಂತನೆ ಇರುತ್ತದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ ಶ್ರೀ ರಾಜೇಂದ್ರ ಜೈಪುರ : 6360337682