ದೇವಸ್ಥಾನ ಅಭಿವೃದ್ಧಿಗೆ 45 ಲಕ್ಷ ಅನುದಾನ
ತೀರ್ಥಹಳ್ಳಿಯ ರಥಬೀದಿ-ಅಗ್ರಹಾರದಲ್ಲಿನ ಕೋದಂಡರಾಮ ದೇವಸ್ಥಾನಕ್ಕೆ 25 ಲಕ್ಷ, ಸುರಾನಿ ಗಣಪತಿಕಟ್ಟೆ ವಿನಾಯಕ ದೇವಸ್ಥಾನಕ್ಕೆ 10 ಲಕ್ಷ, ಜಾವಗಲ್ಲು ಮಲ್ಲಿಕಾರ್ಜುನ ದೇವಸ್ಥಾನಕ್ಕೆ 10 ಲಕ್ಷ ಅನುದಾನ ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾಗಿದೆ.
ಅಯೋದ್ಯಯ ರಾಮ ಮಂದಿರ ಉದ್ಘಾಟನಾ ಸಂದರ್ಭ ಮಾಜಿ ಸಚಿವ ಕಿಮ್ಮನೆ ರತ್ನಾಕರ ಕೋದಂಡರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದು ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಬಾರಿ ಜಟಾಪಟಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೆ ಕಿಮ್ಮನೆ ರತ್ನಾಕರ ಸರ್ಕಾರದಿಂದ ಅನುದಾನ ಕೋರಿ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿಗೆ ಮನವಿ ಸಲ್ಲಿಸಿದ್ದರು.
ಶನಿವಾರ ಕೋದಂಡರಾಮ ದೇವಸ್ಥಾನದಲ್ಲಿ ಮಾಜಿ ಸಚಿವ ಕಿಮ್ಮನೆ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.