ಕೆಲವು ಅಧಿಕಾರಿಗಳೇ ಸಸ್ಪೆಂಡ್ ಆಗ್ತಾರೆ!
ಬೇನಾಮಿ ಪೈಲ್ ಬಂದರೆ ಆಡಳಿತ ಪ್ರಕಟಿಸಬೇಕು –
ಅಮ್ರಪಾಲಿ ಸುರೇಶ್
ತೀರ್ಥಹಳ್ಳಿ ತಾಲ್ಲೂಕು ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಬೆಲೆ ಬಾಳುವ ಖಾಲಿ ಜಾಗದ ಮೇಲೆ ಕೆಲವು ದುಷ್ಟ ಶಕ್ತಿಗಳು ಕಣ್ಣಿಟ್ಟಿದ್ದು, ಈ ಜಾಗಕ್ಕೆ ಈಗಾಗಲೇ ನಕಲಿ ದಾಖಲೆ ಸೃಷ್ಟಿಸಿ, ಫೈಲನ್ನು ಹಿಡಿದುಕೊಂಡು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವುದು ತಿಳಿದು ಬಂದಿದೆ. ಈಗಾಗಲೇ ಮಲ್ಲಿಕಾ ಆರ್. ಭಂಡಾರಿ ಮತ್ತು ಇನ್ನಿತರ ಬೇನಾಮಿ ಹೆಸರಿನಲ್ಲಿ ಕೋಟ್ಯಾಂತರ ಬೆಲೆ ಬಾಳುವ ಖಾಲಿ ಜಾಗವನ್ನು ಕಬಳಿಸಲು ಹುನ್ನಾರ ನಡೆಯುತ್ತಿರುವುದು ಜಗಜ್ಜಾಹೀರಾಗಿದೆ. ತಾಲ್ಲೂಕಿನಾದ್ಯಂತ ಈ ರೀತಿ ಜಾಗವನ್ನು ಖಾತೆ ಮಾಡಿಕೊಟ್ಟಲ್ಲಿ ಸಂಬಂಧ ಪಟ್ಟ ತಹಶೀಲ್ದಾರ್, ಮುಖ್ಯಾಧಿಕಾರಿ ಮತ್ತು ಪಿಡಿಓಗಳು ಹೊಣೆ ಹೊರಬೇಕಾಗುತ್ತದೆ.
ಇಂತಹವರಿಗೆ ಸಹಾಯ ಮಾಡಲು ಹೋಗಿ ಕೆಲವು ಅಧಿಕಾರಿಗಳು
ಸಸ್ಪೆಂಡ್ ಮತ್ತು ಜೈಲಿಗೆ ಹೋಗುವ ಸಂಭವವಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖಾಧಿಕಾರಿಗಳು ಮತ್ತು
ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಕೆಲವು ದುಷ್ಟ ಶಕ್ತಿಗಳ ಕುಮ್ಮಕ್ಕಿಗೆ ಮತ್ತು ಯಾವುದೇ
ರಾಜಕೀಯ ಪ್ರಭಾವಕ್ಕೆ ಒಳಗಾಗದೇ ಹಾಗೂ ಎಂಜಲು ಕಾಸಿಗೆ ಆಸೆ ಪಡೆಯದೇ, ಕಾನೂನಿನ ಚೌಕಟ್ಟಿನಲ್ಲಿ
ಕೆಲಸ ಮಾಡುವುದು ಉತ್ತಮ. ಇಂತಹ ಫೈಲ್ಗಳು ಬಂದಾಗ ಪತ್ರಿಕೆಯ ಮೂಲಕ ಪ್ರಕಟಣೆಗೊಳಿಸಬೇಕು. ನಿಮ್ಮ
ಖಾಲಿ ಖಾಗ ಎಲ್ಲೇ ಇದ್ದರೂ ಜಾಗವನ್ನು ದುಷ್ಟಶಕ್ತಿಗಳಿಂದ ಉಳಿಸಿಕೊಳ್ಳುವುದು ಒಳ್ಳೆಯದು. ಒಂದು
ವೇಳೆ ಅಂತಹ ದುಷ್ಟ ಶಕ್ತಿಗಳಿಗೆ ಯಾರಾದರೂ ಸಹಕಾರ ನೀಡಿದರೆ ಅವರುಗಳ ವಿರುದ್ಧ ನಾನು ತೀರ್ಥಹಳ್ಳಿ
ಕ್ಷೇತ್ರದ ಜನರೊಂದಿಗೆ ಪ್ರತಿಭಟಿಸಬೇಕಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಂಘಟನಾ
ಕಾರ್ಯದರ್ಶಿ ಅಮ್ರಪಾಲಿ ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.