ನಾಳೆಯ “ತೌರೂರ ಸಂಮಾನ” ಕಾರ್ಯಕ್ರಮ ಮುಂದೂಡಿಕೆ
ಶೀಘ್ರದಲ್ಲಿ ನಿಗಧಿಪಡಿಸಿದಂತೆ ಕಾರ್ಯಕ್ರಮ – ಬಸವಾನಿ ವಿಜಯದೇವ್
ರಾಜ್ಯ ಸಹಕಾರಿ ಮುಖಂಡ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ, ಶಿವಮೊಗ್ಗ
ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡರಿಗಾಗಿ ಅಕ್ಟೋಬರ್ 6ರ ಶುಕ್ರವಾರ
ಬೆಳಿಗ್ಗೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ “ತೌರೂರ ಸಂಮಾನ” ಕಾರ್ಯಕ್ರಮ
ಮುಂದೂಡಲಾಗಿದೆ ಎಂದು ಸಹಕಾರಿ ವೇದಿಕೆ ಅಧ್ಯಕ್ಷ ಬಸವಾನಿ ವಿಜಯದೇವ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ಆರ್.ಎಂ. ಮಂಜುನಾಥ ಗೌಡರು ವಿವಿಧ ರೀತಿಯ ದಾಖಲೆಗಳನ್ನು
ಪೂರೈಸುವ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವುದು ಸಾಧ್ಯವಾಗುತ್ತಿಲ್ಲ. ಸರ್ಕಾರದ
ಹಂತದಲ್ಲಿ ದಾಖಲೆಗಳನ್ನು ಪೂರೈಸಬೇಕು ಹಾಗೂ ಶೋಧಕ್ಕೆ ಬಂದಿರುವ ಅಧಿಕಾರಿಗಳು ಸಹಕಾರ
ನೀಡಬೇಕಿದ್ದು ವಿವಿಧ ಕಡೆಗಳಲ್ಲಿ ನಡೆದಿರುವ ಶೋಧ ದಾಖಲೆಗಳಿಗೆ ಸಹಿ ಒದಗಿಸಬೇಕು. ಹಾಗಾಗಿ ಈ
ಒತ್ತಡದ ಸಂದರ್ಭದಲ್ಲಿ ಸ್ವತಃ ಮಂಜುನಾಥ ಗೌಡರೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಬಹುತೇಕ ಅನುಮಾನವಾಗಿರುವ
ಕಾರಣ ಅನಿವಾರ್ಯವಾಗಿ ಈ ಕಾರ್ಯಕ್ರಮ ಮುಂದೂಡಲಾಗುತ್ತಿದ್ದು ನಿಗಧಿ ಪಡಿಸಿದಂತೆ ಶೀಘ್ರದಲ್ಲಿ
ಮತ್ತೊಂದು ದಿನಾಂಕದಲ್ಲಿ ಅದ್ದೂರಿಯಾಗಿ ನೆರವೇರಲಿದೆ ಎಂದು ಬಸವಾನಿ ವಿಜಯದೇವ್ ತಿಳಿಸಿದ್ದಾರೆ.