ರಾಜ್ಯ ಮಟ್ಟದ ಖೋಖೋ
ಪಂದ್ಯಾವಳಿಯಲ್ಲಿ ಸ್ಪರ್ಧೆ
ವಿದ್ಯಾರ್ಥಿಗಳ ಸಾಧನೆಗೆ ಗ್ರಾಮಸ್ಥರ ಅಭಿನಂದನೆ
ಕಳೆದೆರಡು ವರ್ಷಗಳಿಂದ
ಜಿಲ್ಲಾ ಹಾಗೂ ವಿಭಾಗ ಮಟ್ಟದಲ್ಲಿ ಗುಡ್ಡೇಕೇರಿ ಶಾಲೆಯ ಮಕ್ಕಳು ವಿಶೇಷ ಸಾಧನೆ ಮಾಡಿದ್ದಾರೆ. ಈ ವರ್ಷ
ತಾಲೂಕು ಹಂತದಿಂದಲೇ ಚಾಂಪಿಯನ್ಸ್ ಪಟ್ಟ ಪಡೆದುಕೊಂಡು, ಜಿಲ್ಲಾ ಮಟ್ಟಕ್ಕೆ ಕಾಲಿಟ್ಟ ಖೋ ಖೋ ತಂಡಗಳು
ರನ್ನರ್ ಆಪ್ ಪ್ರಶಸ್ತಿ ಪಡೆದಿವೆ. ಬೆಂಗಳೂರು ವಿಭಾಗ ಮಟ್ಟಕ್ಕೆ ಅಶ್ವಿನ್, ಅಪ್ವಾನ್, ಶಾಹಿಲ್, ಅಕ್ಷತಾ,
ವರ್ಷಾ, ಸಹನಾ ಆಯ್ಕೆಯಾದರು. ಸಹನಾ ಹಾಲ್ಕುಂದ, ವರ್ಷಾ ಮೆದೋಳಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಐತಿಹಾಸಿಕ
ಸಾಧನೆ ಮಾಡಿದ್ದಾರೆ.
ಈ ಸಾಧನೆಗೆ ಕಾರಣರಾದ ಎಲ್ಲಾ ಮಕ್ಕಳಿಗೂ, ತರಬೇತಿ ನೀಡಿದ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಬೀರಪ್ಪ ಇಟಗಿ, ಕ್ರೀಡೆಯ ಬೆನ್ನೆಲುಬು ಆಗಿ ನಿಂತ ವಿರೇಶ್ ಸರ್, ಖೋ ಖೋ ಕೋಚಿಂಗ್ ಜವಾಬ್ದಾರಿ ಹೊತ್ತ ಪ್ರೀತಿ ಶರತ್, ಶಾಲೆಯಲ್ಲಿ ದಶಕದಿಂದಲೂ ತರಬೇತಿ ನೀಡುತ್ತಾ ಬಂದ ಬೆನ್ನಿ ತೀರ್ಥಹಳ್ಳಿ, ಮಂಜು ಕುರುವಳ್ಳಿ, ಅಭಿ ರಂಜದಕಟ್ಟೆ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ನಿರಂಜನ್ ಮೂರ್ತಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಚಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಾದ ಗಣೇಶ್, ಅವರಿಗೂ ಶಿಕ್ಷಕರಾದ ಸುಬ್ರಹ್ಮಣ್ಯ ಎಸ್, ರೇವತಿ ಮೇಡಂ, ಆನಂದನ್, ಮಹಂತೇಶ್, ಶೌಕತ್ ಆಲಿ, ಸೌಮ್ಯ,
ಪ್ರದೀಪ, ಎಸ್ಡಿಎಂಸಿ ಅಧ್ಯಕ್ಷ ಸುರೇಶ್ ಎಂ ಜಿ ಹಾಗೂ ಎಲ್ಲಾ ಸದಸ್ಯರಿಗೂ, ಜನಪ್ರತಿನಿಧಿಗಳಿಗೂ, ಗ್ರಾಮಸ್ಥರಿಗೂ, ಹಿರಿಯ ವಿದ್ಯಾರ್ಥಿಗಳಿಗೂ, ಬೆಂಗಳೂರು ವಿಭಾಗ ಮಟ್ಟದಲ್ಲಿ ಆಡಿದ ಅಕ್ಷತಾ ಹೆಚ್ ಯು, ಆಪ್ವಾನ್, ಶಾಹಿಲ್, ಅಶ್ವಿನ್, ಮಕ್ಕಳಿಗೆ ಕ್ರೀಡಾ ಸಮವಸ್ತ್ರ ನೀಡಿದ ಸುರೇಶ್ ಇಂಜಿನಿಯರ್ ಕತಾರ್, ಮಂಜು ಕುರುವಳ್ಳಿ, ವನಮಾಲಯ್ಯ ಇಳಿಮನೆ ಇವರಿಗೂ ಹಾಗೂ ನಮ್ಮ ಶಾಲೆಯ ಬೆನ್ನೆಲುಬು ಸ್ಮಿತಾ ಮೇಡಂ ಹಾಗೂ ಕ್ವೆಸ್ ಕಾರ್ಪ್ ಬೆಂಗಳೂರು, ಗುಡ್ಡೇಕೇರಿ, ಹೊನ್ನೆತಾಳು ಪ್ರಾಥಮಿಕ ಶಾಲಾ ಬಳಗಕ್ಕೂ, ಸಹಕರಿಸಿದ ದಾನಿಗಳನ್ನು ಶಾಲಾಭಿವೃದ್ಧಿ ಸಮಿತಿ ಸ್ಮರಿಸಿಕೊಂಡಿದೆ.