ದಸರಾ ಹಬ್ಬ ಆಚರಣೆಗಾಗಿ ಮಹಾದ್ವಾರ ನಿರ್ಮಾಣ ?
ರಾಷ್ಟ್ರೀಯ ಹೆದ್ದಾರಿಯಲ್ಲಿ ಇದೆಲ್ಲಾ ಬೇಕಿತ್ತಾ..?
ತೀರ್ಥಹಳ್ಳಿ ಪಟ್ಟಣ
ಕೊಪ್ಪ ಸರ್ಕಲ್ನಲ್ಲಿ ಬೃಹತ್ ಮಹಾದ್ವಾರ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ. ಇದಕ್ಕಾಗಿ ಸುಮಾರು
10 ಅಡಿ ಜಾಗದಲ್ಲಿ ಬೃಹತ್ ಪ್ರಮಾಣದ ತಳಪಾಯ ಹಾಕಲಾಗಿದೆ. ದಸರಾ ವಿಶೇಷತೆಗಾಗಿ ಇದನ್ನು ಮಾಡಿದ್ದು ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂಬ ಅಭಿಪ್ರಾಯ ಚುರುಕು ಪಡೆದಿದೆ.
ದ್ವಿಪಥ ರಸ್ತೆಗೆ
ಹೊಂದಿಕೊಂಡಂತೆ ಕೊಪ್ಪ ಸರ್ಕಲ್ನಲ್ಲಿ ಬೃಹತ್ ಪ್ರಮಾಣದ ವಾಲ್ ನಿರ್ಮಾಣದ ಕೆಲಸ ಆರಂಭಗೊಂಡಿದೆ.
ಈ ಜಾಗ ಅತ್ಯಂತ ಕಿರಿದಾಗಿದ್ದು ನಾಲ್ಕು ರಸ್ತೆ ಕೂಡುವ ಜಾಗದಲ್ಲಿ ಆಗಾಗ ಟ್ರಾಫಿಕ್ ಜಾಮ್ ಆಗುತ್ತಿರುತ್ತದೆ.
ಮಹಾಧ್ವಾರ ನಿರ್ಮಾಣಕ್ಕೆ ಈ ಜಾಗ ಸೂಕ್ತವಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
ರಾಜಕೀಯ ದುರುದ್ದೇಶದಿಂದ ಇಂತಹ ಅವಿವೇಕದ ಕೆಲಸ ಮಾಡಬಾರದು. ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣದಿಂದ
ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಅಫಘಾತ ನಡೆಯುವ ಮೊದಲು ಎಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರು
ಆಗ್ರಹಿಸುತ್ತಿದ್ದಾರೆ.