ಬ್ಯಾಂಕ್ ಅಲೆದು ಕಾರ್ಮಿಕರು ಸುಸ್ತು
ಸರ್ಕಾರದ ನಿರ್ಲಕ್ಷ್ಯ ಖಂಡನೀಯ - ಟಿ.ಜೆ. ಅನಿಲ್
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ
ಸರಿಯಾದ ಸಮಯಕ್ಕೆ ವೇತನ ಸಂದಾಯವಾಗುತ್ತಿಲ್ಲ. ಹಣ ಬಿಡುಗಡೆಗೊಳಿಸದೆ ಕೆಲಸ ನಿರ್ವಹಿಸುವಂತೆ ಒತ್ತಡ
ಹೇರುವುದು ಸರಿಯಲ್ಲ. ತಕ್ಷಣ ನರೇಗಾ ಹಣ ಬಿಡುಗಡೆಗೊಳಿಸಬೇಕು ಎಂದು ಗ್ರಾ.ಪಂ. ಒಕ್ಕೂಟದ ಅಧ್ಯಕ್ಷ
ಟಿ.ಜೆ. ಅನಿಲ್ ಒತ್ತಾಯಿಸಿದ್ದಾರೆ.
ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರು ಪರದಾಟಕ್ಕೆ ಸಿಲುಕಿದ್ದಾರೆ. ಎರಡೂವರೆ ತಿಂಗಳಿನಿಂದ
ಬ್ಯಾಂಕ್ ಅಲೆದು ಕಾರ್ಮಿಕರು ಸುಸ್ತಾಗಿದ್ದಾರೆ. ಸಂಘ ಸಂಸ್ಥೆಯಲ್ಲಿ ಸಾಲ ಮಾಡಿಕೊಂಡು ಕುಟುಂಬ ನಿರ್ವಹಿಸುವ
ಸಮಸ್ಯೆಗೆ ಸಿಲುಕಿದ್ದಾರೆ. ನಿಗಧಿತ ಸಮಯಕ್ಕೆ ಹಣ ಮಂಜೂರಾಗದೆ ಇರುವುದು ಕಾರ್ಮಿಕರ ಉತ್ಸಾಹ ಕುಂದಿದೆ
ಎಂದು ದೂರಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಪಿಡಿಓ ಸಭೆ ನಡೆಸಿ ಟಾರ್ಗೆಟ್ ವಿಧಿಸುತ್ತಿದ್ದಾರೆ.
ಜನರ ಮನವೊಲಿಸಿ ಕೆಲಸ ನಿರ್ವಹಿಸಿದರೆ ಹಣ ಮಂಜೂರು ವಿಷಯದಲ್ಲಿ ಸರ್ಕಾರದ ನಿರ್ಲಕ್ಷ್ಯ ಖಂಡನೀಯ ಎಂದು
ಆರೋಪಿಸಿದ್ದಾರೆ.