ಸದಸ್ಯನೊಬ್ಬನಿಂದ ಜಾಗ ಕಬಳಿಕೆ ಆರೋಪ
ಕ್ರಮ ಜರುಗಿಸಿದ ಅರಣ್ಯ ಇಲಾಖೆ
ಹುರುಳಿ ಗ್ರಾಮದ ಬೊಬ್ಬಿ ಮಜಿರೆ
ಗ್ರಾಮದಲ್ಲಿ ಗ್ರಾ.ಪಂ. ಸದಸ್ಯನೊಬ್ಬ ಬಿಎಸ್ಎನ್ಎಲ್ ಟವರ್ಗೆಂದು ಸುಳ್ಳು ಹೇಳಿ ಜಾಗ ಕಬಳಿಕೆಗೆ ಮುಂದಾಗಿದ್ದ ಒತ್ತುವರಿ ಪ್ರದೇಶವನ್ನು ಅರಣ್ಯ ಇಲಾಖೆ ಅಧಿಕಾರಿಗಳು
ತೆರವುಗೊಳಿಸಿದ್ದಾರೆ.
ಟವರ್ಗಾಗಿ ನಿಗಧಿಪಡಿಸಿದ ಜಾಗವನ್ನು
ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಅಕ್ರಮವಾಗಿ ವಶಪಡಿಸಿಕೊಂಡಿದಲ್ಲದೇ ತಂತಿ ಬೇಲಿ ಸುತ್ತಿರುವುದು
ಅಕ್ರಮ ಎಂದು ಅಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಲಗಾಯ್ತಿನಿಂದಲೂ
ಸೊಪ್ಪು, ದರಗು ಇತ್ಯಾದಿ ಕೃಷಿ ಚಟುವಟಿಕೆಗಳಿಗಾಗಿ ರೂಢಿಸಿಕೊಂಡಿದ್ದ ಈ
ಸ್ಥಳದಲ್ಲಿ ಕೆಲವು ಸಮಯದ ಹಿಂದೆ ಜೆಸಿಬಿ ಯಂತ್ರದ ಮೂಲಕ ಸಮತಟ್ಟು ಕೆಲಸ ಮಾಡಿಸಲಾಗಿದ್ದು
ವಿಚಾರಿಸಿದಾಗ ಬಿಎಸ್ಎನ್ಎಲ್ ಟವರ್ ನಿರ್ಮಾಣಕ್ಕಾಗಿ ಕೆಲಸ ಮಾಡಲಾಗುತ್ತಿದೆ ಎಂಬ ಸಬೂಬು
ದೊರೆತಿತ್ತು. ಅದಾದ ನಂತರ ಸ್ವಂತ ಉದ್ದೇಶಕ್ಕೆ ಜಾಗ ಬಳಕೆಗೆ
ಮುಂದಾಗಿದ್ದ ಸದಸ್ಯನಿಗೆ ವಾರ್ನಿಂಗ್ ನೀಡಿ ಜಾಗವನ್ನು ತೆರವುಗೊಳಿಸಲಾಗಿದೆ.
ಬೇಲಿಗಾಗಿ ಬಳಸಿದ ಕಲ್ಲುಕಂಬ, ತಂತಿ ಮುಂತಾದ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.