ಸೆಪ್ಟೆಂಬರ್ 12 ರಂದು ಸರ್ವ ಸದಸ್ಯರ ಮಹಾಸಭೆ - ಬಸವಾನಿ ವಿಜಯದೇವ್
ಭೂ ಬ್ಯಾಂಕ್ ರಾಜ್ಯದ ಬೆರಳೆಣಿಕೆ ಲಾಭಗಳಿಸಿದ ಸಂಸ್ಥೆಗಳಲ್ಲಿ ಒಂದು
ಶಿವಮೊಗ್ಗ
ಜಿಲ್ಲೆಯಲ್ಲಿ ಪ್ರತೀ ವರ್ಷದಂತೆ ತೀರ್ಥಹಳ್ಳಿ ಭೂ ಅಭಿವೃದ್ಧಿ ಬ್ಯಾಂಕ್ ಪ್ರಥಮ
ಸ್ಥಾನದಲ್ಲಿದೆ. ಒಟ್ಟು 36.22 ಕೋಟಿ ರೂಪಾಯಿ ವ್ಯವಹಾರ ನಡೆಸಿ 50 ಲಕ್ಷ ರೂಪಾಯಿ ಮಿಕ್ಕಿ
ಲಾಭಗಳಿಸಿದೆ. ನಬಾರ್ಡ್ ಪುರಸ್ಕೃತ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಪ್ರಾಥಮಿಕ ಕೃಷಿ
ಗ್ರಾಮೀಣ ಬ್ಯಾಂಕ್
ಎಂಬ ಹೆಗ್ಗಳಿಕೆ ಉಳಿಸಿಕೊಂಡು ಬಂದಿದೆ. ಮೂರು ವರ್ಷಗಳಿಂದ ಸಾಲಮನ್ನಾ, ಕೋವಿಡ್ ಹಿನ್ನಲೆಯಲ್ಲಾದ ಆರ್ಥಿಕ ಅಸಮತೋಲನಗಳ
ನಡುವೆಯೂ ರೈತರ ಸಹಕಾರದಿಂದ ಲಾಭದಲ್ಲಿ ನಡೆಯುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಬಸವಾನಿ
ವಿಜಯದೇವ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಒಟ್ಟು 5098
ಷೇರುದಾರರಿದ್ದು ವಿವಿಧ
ಯೋಜನೆಯಡಿ ದೀರ್ಘಾವಧಿ, ಮಧ್ಯಮಾವಧಿ
ಸಾಲ ನೀಡುತ್ತಾ ಬಂದಿದೆ. 17 ವರ್ಷಗಳಿಂದ
ಆಡಿಟ್ ತಪಾಸಣೆಯಲ್ಲಿ ʼಎʼ ಗ್ರೇಡ್ ಪಡೆದಿದೆ. ಆರ್ಥಿಕ ವರ್ಷದಲ್ಲಿ ಶೇಕಡ 70.14 ರಷ್ಟು ಸಾಲ
ವಸೂಲಾತಿಯಾಗಿದೆ. ಸಕಾಲದಲ್ಲಿ
ಮರುಪಾತಿ ಮಾಡದೇ ನಿರಂತರ ಸುಸ್ತಿದಾರರಾದ 65
ಸಾಲಗಾರ ಸದಸ್ಯರ ಮೇಲೆ ದಾವೆ ಹೂಡಲಾಗಿದೆ. ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಸೆಪ್ಟೆಂಬರ್ 12 ರಂದು ನಡೆಯಲಿದೆ ಎಂದರು.
ರಾಜ್ಯ ಭೂ ಬ್ಯಾಂಕ್ಗೆ ಸರ್ಕಾರದ ವಿಶೇಷ ನೆರವು ಇರುವುದರಿಂದ ಸಾಲಮನ್ನಾ ಮುಂತಾದ ಕಾರಣಗಳಿಂದ ಬಹುತೇಕ ಬ್ಯಾಂಕ್ ನಷ್ಟದ ಸುಳಿಯಲ್ಲಿದೆ. ತೀರ್ಥಹಳ್ಳಿಯ ಭೂ ಬ್ಯಾಂಕ್ ಬಸವಾನಿ ವಿಜಯದೇವ್ ಸಾರಥ್ಯದಲ್ಲಿ ಸಾಲ ವಸೂಲಾತಿಗೆ ವಿಶೇಷ ಪ್ರಯತ್ನ ನಡೆಸುವುದರಿಂದ ಉತ್ತಮ ಶೇಕಡಾ 70 ರಷ್ಟು ವಸೂಲಾತಿಯಾಗುತ್ತಿದೆ. ಜೊತೆಗೆ ಉತ್ತಮ ಲಾಭ ಕೂಡ ಗಳಿಸಿರುವುದು ವಿಶೇಷ.