ತೀರ್ಥಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)
ವಾರ್ಷಿಕವಾಗಿ 125.14 ಕೋಟಿ ವ್ಯವಹಾರ ನಡೆಸಿ 15.11 ಲಕ್ಷ ನಿವ್ವಳ ಲಾಭ ಪಡೆದಿದೆ. ಸಂಸ್ಥೆ ಲಾಭದಾಯಕವಾಗಿ ನಡೆಯುತ್ತಿದ್ದು
ಸದಸ್ಯರಿಗೆ 10 ರಷ್ಟು
ಡಿವಿಡೆಂಟ್ ವಿತರಿಸಲು ನಿರ್ಧರಿಸಲಾಗಿದೆ. ಸದಸ್ಯರ ವ್ಯವಸಾಯೋತ್ಪನ್ನಗಳನ್ನು ಲಾಭದಾಯಕವಾಗುವ
ರೀತಿಯಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕ, ವ್ಯವಸಾಯ ಉಪಕರಣ, ಆರ್ಸಿಸಿ ಪೈಪ್, ಕಾಂಕ್ರಿಟ್ ಸಾಮಾಗ್ರಿ, ಆಹಾರ ಧಾನ್ಯ, ಮದ್ದುಗುಂಡು, ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ರಿಯಾಯಿತಿ
ದರದಲ್ಲಿ ವಿತರಿಸುತ್ತಿದ್ದೇವೆ ಎಂದು ಅಧ್ಯಕ್ಷ ನಾಗರಾಜ ಶೆಟ್ಟಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಅಕ್ಕಿಗಿರಣಿಯಲ್ಲಿ ವಾರ್ಷಿಕ 4006 ಕ್ವಿಂಟಾಲ್
ಅಕ್ಕಿ ಮಾಡಲಾಗಿದೆ. 16,464 ಕೆ.ಜಿ.
ವಿವಿಧ ಧಾನ್ಯಗಳ ಹಿಟ್ಟನ್ನು ಮಾಡಲಾಗುತ್ತಿದ್ದು 9.76 ಲಕ್ಷ ಲಾಭ
ಗಳಿಸಿದ್ದೇವೆ. ಅಡಿಕೆ ಕಮಿಷನ್
11.72 ಲಕ್ಷ ಲಾಭ ಬಂದಿದೆ. ವಿವಿಧ ವಾಣಿಜ್ಯ ಮಳಿಗೆಯಿಂದ 23
ಲಕ್ಷ ಬಾಡಿಗೆ ಆದಾಯ
ಪಡೆದಿದ್ದೇವೆ. ಆಡಿಟ್ ವರದಿಯಲ್ಲಿ
“ಎ”
ವರ್ಗೀಕರಣ ಪಡೆಯುವ ಮೂಲಕ ಸದಸ್ಯರ ನಿರೀಕ್ಷೆಯಂತೆ ಸಂಸ್ಥೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ
ಹಿರಿಯ ಸಹಕಾರಿಗಳಾದ ಬಸವಾನಿ ವಿಜಯದೇವ್, ಕಡಿದಾಳು ತಾರಾನಾಥ, ಗುಡ್ಡೇಕೊಪ್ಪ ಗಿರಿಯಪ್ಪಗೌಡ, ರಾಜ್ಕಮಲ್,
ಕಾರ್ಯದರ್ಶಿ ರಚನಾ ಇದ್ದರು.