ಟಿಎಪಿಸಿಎಂಎಸ್‌ಗೆ 15 ಲಕ್ಷ ನಿವ್ವಳ ಲಾಭ

ತೀರ್ಥಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್‌) ವಾರ್ಷಿಕವಾಗಿ 125.14 ಕೋಟಿ ವ್ಯವಹಾರ ನಡೆಸಿ 15.11 ಲಕ್ಷ ನಿವ್ವಳ ಲಾಭ ಪಡೆದಿದೆ. ಸಂಸ್ಥೆ ಲಾಭದಾಯಕವಾಗಿ ನಡೆಯುತ್ತಿದ್ದು ಸದಸ್ಯರಿಗೆ 10 ರಷ್ಟು ಡಿವಿಡೆಂಟ್‌ ವಿತರಿಸಲು ನಿರ್ಧರಿಸಲಾಗಿದೆ. ಸದಸ್ಯರ ವ್ಯವಸಾಯೋತ್ಪನ್ನಗಳನ್ನು ಲಾಭದಾಯಕವಾಗುವ ರೀತಿಯಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕ, ವ್ಯವಸಾಯ ಉಪಕರಣ, ಆರ್‌ಸಿಸಿ ಪೈಪ್‌, ಕಾಂಕ್ರಿಟ್‌ ಸಾಮಾಗ್ರಿ, ಆಹಾರ ಧಾನ್ಯ, ಮದ್ದುಗುಂಡು, ಪ್ಲಾಸ್ಟಿಕ್‌ ಸಾಮಾಗ್ರಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸುತ್ತಿದ್ದೇವೆ ಎಂದು ಅಧ್ಯಕ್ಷ ನಾಗರಾಜ ಶೆಟ್ಟಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಅಕ್ಕಿಗಿರಣಿಯಲ್ಲಿ ವಾರ್ಷಿಕ 4006 ಕ್ವಿಂಟಾಲ್‌ ಅಕ್ಕಿ ಮಾಡಲಾಗಿದೆ. 16,464 ಕೆ.ಜಿ. ವಿವಿಧ ಧಾನ್ಯಗಳ ಹಿಟ್ಟನ್ನು ಮಾಡಲಾಗುತ್ತಿದ್ದು 9.76 ಲಕ್ಷ ಲಾಭ ಗಳಿಸಿದ್ದೇವೆ. ಅಡಿಕೆ ಕಮಿಷನ್‌ 11.72 ಲಕ್ಷ ಲಾಭ ಬಂದಿದೆ. ವಿವಿಧ ವಾಣಿಜ್ಯ ಮಳಿಗೆಯಿಂದ 23 ಲಕ್ಷ ಬಾಡಿಗೆ ಆದಾಯ ಪಡೆದಿದ್ದೇವೆ. ಆಡಿಟ್‌ ವರದಿಯಲ್ಲಿ ವರ್ಗೀಕರಣ ಪಡೆಯುವ ಮೂಲಕ ಸದಸ್ಯರ ನಿರೀಕ್ಷೆಯಂತೆ ಸಂಸ್ಥೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಸಹಕಾರಿಗಳಾದ ಬಸವಾನಿ ವಿಜಯದೇವ್‌, ಕಡಿದಾಳು ತಾರಾನಾಥ, ಗುಡ್ಡೇಕೊಪ್ಪ ಗಿರಿಯಪ್ಪಗೌಡ, ರಾಜ್‌ಕಮಲ್‌, ಕಾರ್ಯದರ್ಶಿ ರಚನಾ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post