“ರಾಜೀನಾಮೆ
ನೀಡುತ್ತೇನೆಂದ ಅಧ್ಯಕ್ಷರು” – ದೇವರಾಜ್
“ಆಡಳಿತದಿಂದ
ಅಸಹಕಾರ” –
ಪಿಡಿಓ
ತೀರ್ಥಹಳ್ಳಿ ತಾಲ್ಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸೂತ್ರವಾಗಿ
ಕಸ ವಿಲೇವಾರಿ ಆಗುತ್ತಿಲ್ಲ. ಮಳೆ ಆರಂಭವಾಗಿದ್ದು ಎಲ್ಲೆಂದರಲ್ಲಿ ಕಸ ಹರಡಿಕೊಳ್ಳುತ್ತಿದೆ. ಮೋರಿಗಳು
ಕಸ ಸಿಲುಕಿ ಮುಚ್ಚಿಕೊಂಡಿದ್ದ ದುರಸ್ಥಿ ಆಗುತ್ತಿಲ್ಲ. ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿಲ್ಲ.
ಕೆಸರು, ಕೆಂಪು ಮಿಶ್ರಿತ ನೀರು ಮನೆಗಳಿಗೆ ತಲುಪುತ್ತಿದೆ. ಸಮಸ್ಯೆ ಹೇಳಿಕೊಂಡು ಗ್ರಾಮ ಪಂಚಾಯಿತಿಗೆ
ಆಗಮಿಸುತ್ತಿದ್ದರು ಯಾವೊಬ್ಬ ನಾಹರೀಕನ ಕೆಲಸಗಳು ಆಗುತ್ತಿಲ್ಲ. ಪೂರ್ಣ ಪ್ರಮಾಣದಲ್ಲಿ ಮಳೆ ಆರಂಭವಾಗುವ
ಮೊದಲು ಸ್ಥಳೀಯ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿಕೊಡಿ ಎಂದು ಗ್ರಾಮದ ಯುವ ಮುಖಂಡರು ಮಂಗಳವಾರ ಗ್ರಾಮ
ಪಂಚಾಯಿತಿ ಪಿಡಿಓಗೆ ಮನವಿ ಸಲ್ಲಿಸಿದರು.
ಸಮಸ್ಯೆ ಆಲಿಸಿ ಪ್ರತಿಕ್ರೀಯಿಸಿದ ಪಿಡಿಓ ಆಡಳಿತದಿಂದ ಸಂಪೂರ್ಣ ಸಹಕಾರ ಲಭ್ಯವಾಗುತ್ತಿಲ್ಲ. ಅಸಹಕಾರದಿಂದ
ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಗಮನಕ್ಕೆ
ತಂದರೂ ಕೂಡ ಪ್ರಯೋಜನವಾಗುತ್ತಿಲ್ಲ. ಅಧ್ಯಕ್ಷರು ಹಾಗೂ ಸದಸ್ಯರು ಸರಿಯಾದ ಸಮಯಕ್ಕೆ ಸಾಮಾನ್ಯ ಸಭೆ
ನಡೆಸುತ್ತಿಲ್ಲ. ಪೋನ್ ಮೂಲಕ ಮನವಿ ಮಾಡಿಕೊಂಡರೆ ರಾಜೀನಾಮೆ ನೀಡುತ್ತೇನೆ ಎಂದು ಉತ್ತರ ನೀಡುತ್ತಿದ್ದಾರೆ.
ಅಧಿಕಾರಿಗಳು ಆಡಳಿತವನ್ನೂ ದೂರಿದರೆ ಆಡಳಿತ ಅಧಿಕಾರಿ ವರ್ಗವನ್ನು ದೂರುತ್ತಿದೆ. ಇಬ್ಬರ ನಡುವಿನ ಜಗಳದಲ್ಲಿ
ಕೂಸು ಬಡವಾಯಿತೇ ಎಂಬ ಸ್ಥಿತಿ ಜನರದ್ದಾಗಿದೆ ಎಂದು ಬಿಜೆಪಿ ಮುಖಂಡ ದೇವರಾಜ್ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಸಿದ್ಧಾರ್ಥ, ರಿಜ್ವಾನ್, ಸೂರ್ಯ, ಸಿಖಂದರ್, ಯೋಗೀಶ, ಪ್ರಮೋದ, ನವೀನ, ಶಶಾಂಕ್, ದರ್ಶನ್ ಇದ್ದರು.