ಚುನಾವಣೆ ಬಹಿಷ್ಕಾರ ಎಚ್ಚರಿಕೆ

ಜಿಲ್ಲಾಧಿಕಾರಿಗೆ ಪತ್ರ ಬರೆದ ಮುನ್ನೂರು ಗ್ರಾಮಸ್ಥರು

ತೀರ್ಥಹಳ್ಳಿ ತಾಲ್ಲೂಕಿನ ಹುಣಸವಳ್ಳಿ ಗ್ರಾಮದ ಮಜಿರೆ ಮುನ್ನೂರು ಗ್ರಾಮದ ಗದ್ದೆ, ತೋಟಗಳಿಗೆ ಸಂಪರ್ಕಕ್ಕೆ ರಸ್ತೆ ಇಲ್ಲವಾಗಿದೆ. ಇದರಿಂದ ರೈತರು ತಮ್ಮ ಜಮೀನಿಗೆ ಟಿಲ್ಲರ್‌, ಟ್ರಾಕ್ಟರ್, ಪಿಕಪ್‌ ವಾಹನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಜಮೀನಿನಲ್ಲಿ ಬೆಳೆ ಬೆಳೆಯುವುದಕ್ಕೆ ಮತ್ತು ಫಸಲು ಸಂಗ್ರಹಣೆಗೆ ಯಂತ್ರಗಳನ್ನು ಬಳಸದ ಸ್ಥಿತಿ ನಿರ್ಮಾಣವಾಗಿದೆ. ತಲೆಯ ಮೇಲೆ ಸಾಮಾಗ್ರಿಗಳನ್ನು ಹೊತ್ತುಕೊಂಡು ಜಮೀನನ್ನು ಸಂಪರ್ಕಿಸುವುದು ಬಹಳ ಕಷ್ಟವಾಗಿದೆ. ಅನೇಕರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯುವುದನ್ನು ನಿಲ್ಲಿಸಿದ್ದು ತಕ್ಷಣ ಸ್ಪಂದಿಸುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು ಪ್ರಯೋಜವಾಗಿಲ್ಲ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ತೀರ್ಮಾನಿಸಿದ್ದೇವೆ ಎಂದು ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಪತ್ರ ಬರೆದಿದ್ದಾರೆ.

ಸ.ನಂ. 34 ರಿಂದ ಪ್ರಾರಂಭವಾಗಿ ಸ.ನಂ. 27, 26, 24, 23, 39, 21 ಮತ್ತು 38ರ ಜಮೀನುಗಳಿಗೆ ಓಡಾಡಲು ಅನುಕೂಲವಾಗುವಂತೆ 20 ಅಡಿ ಅಗಲದ ರಸ್ತೆಯನ್ನು ಬಿಟ್ಟುಕೊಂಡಿರುತ್ತೇವೆ. ಈ ರಸ್ತೆಯಲ್ಲಿ ಟಿಲ್ಲರ್‌, ಟ್ರಾಕ್ಟರ್‌, ಪಿಕಪ್‌ಗಳಲ್ಲಿ ಗೊಬ್ಬರ ಇತ್ಯಾದಿ ಬೇಸಾಯದ ಪರಿಕರಗಳನ್ನು ಅವರವರ ತೋಟಗಳಿಗೆ ಸಾಗಿಸುವುದು, ಫಸಲು ಮನೆಗೆ ಸಾಗಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುತ್ತೆ. ಸ.ನಂ. 27ರಲ್ಲಿ 0.02 ಗುಂಟೆ ಖರಾಬು 0.02 ಗುಂಟೆ ಸರ್ಕಾರಿ ಜಾಗ ಅತಿಕ್ರಮಣ ಮಾಡಿಕೊಂಡಿದ್ದನ್ನು ಸ್ಥಳೀಯ ಕಂದಾಯ ಅಧಿಕಾರಿಗಳು ತೆರವುಗೊಳಿಸಿ ನಮಗೆ ದಾರಿ ಬಿಡಿಸಿಕೊಟ್ಟಿರುತ್ತಾರೆ. ಆದರೆ ಸ.ನಂ. 24 ಮತ್ತು 39ರ ಸಾಗುವಳಿದಾರರು ಎರಡು ಸರ್ವೆ ನಂಬರ್‌ಗಳಲ್ಲಿ ರಸ್ತೆಗೆ ಜಾಗ ಬಿಟ್ಟುಕೊಡದ ಕಾರಣದ ರೈತರಿಗೆ ತೊಂದರೆಯಾಗಿದೆ.

ಈಗಾಗಲೇ ಸ.ನಂ. 24 ಮತ್ತು 39ರ ಗಡಿಯಲ್ಲಿ ನಿಂತಿದೆ. ಅಲ್ಲಿಂದ ಮುಂದೆ ಸ.ನಂ. 23,21,38ರ ಜಮೀನುಗಳ ರೈತರು ತಮ್ಮ ಜಮೀನುಗಳಲ್ಲಿ ರಸ್ತೆ ಬಿಟ್ಟುಕೊಂಡಿರುತ್ತೇವೆ. ಸ.ನಂ. 24 ಮತ್ತು 39ರ ನಡುವೆ ರಸ್ತೆ ಬಿಡದೇ ಇರುವುದರಿಂದ ಇಲ್ಲಿನ ಎಲ್ಲಾ ರೈತರಿಗೂ ತೀವ್ರ ತೊಂದರೆಯಾಗುತ್ತಿದೆ.

ಇದರ ಬಗ್ಗೆ ಈಗ ಎರಡು ತಿಂಗಳ ಹಿಂದೆ ತಹಶೀಲ್ದಾರ್‌ರವರಿಗೆ ಮನವಿ ಮಾಡಿಕೊಂಡಿದ್ದು, ನಮ್ಮ ಮನವಿಯನ್ನು ಇಲ್ಲಿಯವರೆಗೆ ಸ್ಪಂದಿಸಿರುವುದಿಲ್ಲ. ಸ.ನಂ. 24 ಮತ್ತು 39ರ ಸಾಗುವಳಿದಾರರು ಈ ಎರಡು ಸರ್ವೆ ನಂಬರ್‌ಗಳ ನಡುವೆ ರಸ್ತೆಗೆ ಜಾಗ ಬಿಡದೇ ಇರುವುದರಿಂದ ನಮಗೆ ಈಗಿನ ಕಾಲಮಾನಕ್ಕೆ ತಕ್ಕಂತೆ ಯಾಂತ್ರೀಕೃತ ಕೃಷಿ ಅವಲಂಬಿಸಿ ಕೃಷಿ ಅಭಿವೃದ್ಧಿ ಪಡಿಸಿಕೊಳ್ಳಲು ಅವಕಾಶವಾಗುತ್ತಿಲ್ಲವಾದ ಕಾರಣ ಗ್ರಾಮಸ್ಥರು ಹಾಗೂ ರೈತರ ಕನಿಷ್ಟ ಅವಶ್ಯಕತೆಗಳನ್ನು ಪೂರೈಸದ ಸರ್ಕಾರದ ಹಾಗೂ ಅಧಿಕಾರಿಗಳ ನೀತಿಯನ್ನು ಖಂಡಿಸಿ ವಿಧಾನಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸುತ್ತೇವೆ ಗ್ರಾಮಸ್ಥರು ಸಹಿ ಹಾಕಿ ಜಿಲ್ಲಾಧಿಕಾರಿಗೆ ಮತ ಬಹಿಷ್ಕಾರದ ಪತ್ರ ಬರೆದಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post