650 ಕೋಟಿಗೂ ಹೆಚ್ಚಿದ ವಿವಿಧ ಕಾಮಗಾರಿಗೆ ಶಿಲನ್ಯಾಸ
ನಾನು ಹಿಂದೆ ಮೂರು ಬಾರಿ ಶಾಸಕನಾಗಿದ್ದಾಗಲೂ ವಿರೋಧಪಕ್ಷದಲ್ಲಿ ಇದ್ದ ಕಾರಣ ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಷ್ಟವಾಗುತ್ತಿತ್ತು. ಆದರೆ ಇದೇ ಮೊದಲ ಬಾರಿ ಆಡಳಿತ ಪಕ್ಷದ ಶಾಸಕ ಸಚಿವನಾಗಿದ್ದೇನೆ. ಹಾಗಾಗಿ ತೀರ್ಥಹಳ್ಳಿ ಹಿಂದೆಂದೂ ಕಾಣದ ಅಭಿವೃದ್ದಿ ಪರ್ವವನ್ನು ಕಾಣುತ್ತಿದೆ. ಸುಮಾರು 650 ಕೋಟಿಗೂ ಹೆಚ್ಚಿನ ಅಭಿವೃದ್ದಿ ಕಾಮಗಾರಿಗಳನ್ನು ಬಸವರಾಜ ಬೊಮ್ಮಾಯಿ ತೀರ್ಥಹಳ್ಳಿಯಲ್ಲಿ ಉದ್ಘಾಟಿಸಲಿದ್ದಾರೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ
ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನೀರು ಸರಬರಾಜು ಯೋಜನೆಗೆ 454 ಕೋಟಿ ರೂ ಮೀಸಲಿಡಲಾಗಿದೆ.
ತೀರ್ಥಹಳ್ಳಿಯ ಯಾವ ಹಳ್ಳಿಯೂ ಕೂಡ ಕುಡಿಯುವ ನೀರಿನ ತೊಂದರೆಯಿಂದ ಬಳಲಬಾರದು ಎಂಬುದು ಇದರ ಉದ್ದೇಶ.
ಉಳಿದಂತೆ ಗ್ರಾಮೀಣ ರಸ್ತೆಗಳು, ಕ್ಷೇತ್ರ ವ್ಯಾಪ್ತಿಯ 42 ವಿವೇಕ ಶಾಲಾ ಕೊಠಡಿಗಳು, ಸರ್ಕಾರಿ ನೌಕರರ
ವಸತಿಗೃಹ, ಪ್ರವಾಸಿ ಮಂದಿರ ಅಭಿವೃದ್ಧಿ, ಕೋಣಂದೂರು ತೀರ್ಥಹಳ್ಳಿ ಭಾಗಗಳ ಚತುಷ್ಪತ ರಸ್ತೆಗಳು, ಸರ್ಕಾರಿ
ಪ್ರಥಮ ದರ್ಜೆ ಕಾಲೇಜು ಕಟ್ಟಡ, ಪಟ್ಟಣ ಪಂಚಾಯಿತಿ ಕಟ್ಟಡ, ಪೊಲೀಸ್, ಅಗ್ನಿ ಶಾಮಕ ಠಾಣೆ ಕಚೇರಿ,
ವಸತಿ ಸಂಕೀರ್ಣಗಳು, ಸಂಪೆಕಟ್ಟೆ, ಕಾರ್ಗಡಿ, ಬಿಲ್ ಸಾಗರ್ ಸೇತುವೆ, ಹೊಸಳ್ಳಿ, ತೂದೂರು ಸೇತುವೆ,
ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 25 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರವಾಗಿ ಮಾರ್ಪಾಡು
ಸೇರಿದಂತೆ ಸುಮಾರು 196 ಕೋಟಿ ರೂಪಾಯಿಗಳ ಮೀಸಲಿಡಲಾಗಿದೆ.
ಕಿಮ್ಮನೆ ರತ್ನಾಕರ್
ಸಚಿವರಾಗಿದ್ದ ಕಾಲಗಳಲ್ಲಿ ಕೇವಲ ಘೋಷಣೆಗಳಾಗಿದ್ದವೆ ಹೊರತು ಅವು ಕಾರ್ಯ ರೂಪಕ್ಕೆ ಬಂದಿರಲಿಲ್ಲ. ಅಭಿವೃದ್ದಿ
ಕಾರ್ಯಕ್ರಮಕ್ಕೆ ನೈಜ ಜನಪರ ಇಚ್ಚಾಶಕ್ತಿ ಬೇಕು. ಆಡಳಿತಾತ್ಮಕ ಮಂಜೂರಾತಿ ಇಲ್ಲದೆ ಉದ್ಘಾಟನೆಗೊಂಡ
ಕಾಮಗಾರಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ಹಣ ಬಿಡುಗಡೆ ಮಾಡಿದ್ದೇವೆ. ಈಗ ಮಂಜೂರಾದ ಎಲ್ಲಾ ಕಾಮಗಾರಿಗಳಿಗೆ
ಆಡಳಿತಾತ್ಮಕ ಮಂಜೂರಾತಿ ದೊರೆತಿರುವುದರಿಂದ ಇಷ್ಟು ಅಭಿವೃದ್ಧಿ ಸಾಧ್ಯವಾಗಿದೆ ಎಂದರು.
ನವೆಂಬರ್ 27ರಂದು
ಭಾನುವಾರ ಮಧ್ಯಾಹ್ನ 3 ಗಂಟೆಗೆ ಸಾರ್ವಜನಿಕ ಕ್ರೀಡಾಂಗಣದಲ್ಲಿ ನಡೆಯುವ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರುಗಳಾದ ಡಾ.ಕೆ.ಸಿ. ನಾರಾಯಣ ಗೌಡ, ಡಾ.ಅಶ್ವತ್
ನಾರಾಯಣ, ಸಿ.ಸಿ. ಪಾಟೀಲ್, ಗೋವಿಂದ ಕಾರಜೋಳ, ಡಾ.ಕೆ.ಸುಧಾಕರ್, ಬಿ.ಸಿ. ನಾಗೇಶ್, ಬೈರತಿ ಬಸವರಾಜ್,
ಎಂ.ಟಿ.ಬಿ. ನಾಗರಾಜ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ,
ಶಾಸಕ ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನಪರಿಷತ್ತು ಸದಸ್ಯರಾದ ಆಯನೂರು ಮಂಜುನಾಥ್, ಎಸ್.ಎಲ. ಬೊಜೇಗೌಡ,
ಎಸ್. ರುದ್ರೇಗೌಡ, ಭಾರತೀಶೆಟ್ಟಿ, ಡಿ.ಎಸ್. ಅರುಣ್, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಕೆ.ಎಸ್,
ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಪವಿತ್ರ ರಾಮಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ
ಶೆಟ್ಟಿ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಜಿ.ಪಂ. ಸಿಇಓ ಎನ್.ಡಿ. ಪ್ರಕಾಶ್, ಜಿಲ್ಲಾ ರಕ್ಷಣಾಧಿಕಾರಿ
ಮಿಥುನ್ ಕುಮಾರ್, ಎಸಿ ರವಿಚಂದ್ರ ನಾಯ್ಕ ಪಾಲ್ಗೊಳ್ಳಲಿದ್ದಾರೆ.