ಮಲೆನಾಡ ರೈತರ
ಆತಂಕ ದೂರಕ್ಕೆ ಕ್ರಮ
ಆರ್ಥಿಕ ಸಹಾಯದಕ್ಕೆ
ಬೇಡಿಕೆ ಸಲ್ಲಿಸಿದ ಆರಗ
ಆರಗ ಜ್ಞಾನೇಂದ್ರರಿಂದ
ರೋಗ ನಿಯಂತ್ರಣಕ್ಕೆ ಸೂಚನೆ
ಅಧಿಕಾರಿಗಳಿಗೆ
ನಿರ್ದೇಶಿಸಿದ ತೋಟಗಾರಿಕಾ ಸಚಿವ
ಮುನಿರತ್ನ
ಮಲೆನಾಡಿನ
ಕೆಲವು ಭಾಗಗಳಲ್ಲಿ ಅಡಿಕೆಗೆ ಎಲೆ ಚುಕ್ಕೆ ರೋಗ ಭಾಧೆ ಕಾಣಿಸಿಕೊಂಡಿದ್ದು,
ರೈತ ಸಮುದಾಯದಲ್ಲಿ ಆತಂಕದ ಛಾಯೆ ಮೂಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಅಡಕೆ ಟಾಸ್ಕ್ ಫೋರ್ಸ್
ಅಧ್ಯಕ್ಷರೂ ಗೃಹ ಸಚಿವ ಆರಗ
ಜ್ಞಾನೇಂದ್ರ ಹಾಗೂ ತೋಟಗಾರಿಕಾ ಸಚಿವ
ಮುನಿರತ್ನ ಜಂಟಿಯಾಗಿ ತೋಟಗಾರಿಕಾ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರೋಗ
ನಿಯಂತ್ರಣದ ಬಗ್ಗೆ ವಿಸ್ತಾರವಾಗಿ ಚರ್ಚಿಸಿದರು.
ಆರಗ ಜ್ಞಾನೇಂದ್ರ
ನೇತೃತ್ವದಲ್ಲಿ ರೋಗ ಬಾಧೆಯಿಂದ
ಹಾನಿ ಅನುಭವಿಸಿದ ರೈತರಿಗೆ, ಆರ್ಥಿಕ ಪರಿಹಾರ ಒದಗಿಸುವುದು, ಎಲೆಚುಕ್ಕೆ ರೋಗ ಹತೋಟಿಗೆ ತರುವ
ಬಗ್ಗೆ, ರೈತರಿಗೆ ಉಚಿತವಾಗಿ ಔಷಧಿ ಹಾಗೂ ಸುಧಾರಿತ
ದೋಟಿ ಒದಗಿಸುವ ಬಗ್ಗೆ ಚರ್ಚಿಸಲಾಯಿತು. ನಂತರ ತೋಟಗಾರಿಕೆ
ಸಚಿವ ಮುನಿರತ್ನ ಅಧಿಕಾರಿಗಳಿಗೆ ನಿರ್ದೇಶನ
ನೀಡಿದ್ದಾರೆ ಎಂದು ತಿಳಿದುಬಂದಿದೆ.
ಎಷ್ಟು
ಪ್ರಮಾಣದಲ್ಲಿ ಅಡಕೆ ಬೆಳೆ ಎಲೆಚುಕ್ಕೆ
ರೋಗದಿಂದಾಗಿ ಹಾನಿಯಾಗಿದೆ ಎಂಬುದರ ಬಗ್ಗೆ ಸಮೀಕ್ಷಾ ಕಾರ್ಯ ನಡೆಸುವ ಬಗ್ಗೆಯೂ ನಿರ್ಧರಿಸಲಾಯಿತು.
ಎಲೆಚುಕ್ಕೆ
ರೋಗ ಬಾಧೆಯ ತೀವ್ರತೆಯ ಬಗ್ಗೆ ಪ್ರಸ್ತಾಪಿಸಿದ
ಗೃಹ ಸಚಿವರು, ತಕ್ಷಣವೇ ರೋಗವನ್ನು ಹತೋಟಿಗೆ ತರಲು ಅನುಕೂಲವಾಗುವಂತೆ, ರೈತರಿಗೆ
ಉಚಿತವಾಗಿ ಔಷಧಿ ಹಾಗೂ ಇತರ
ಸಹಾಯವನ್ನು ಸರಕಾರದಿಂದ ನೀಡಬೇಕು ಎಂದು ತಿಳಿಸಿದ್ದಾರೆ.
ಬಂದರು
ಹಾಗೂ ಮೀನುಗಾರಿಕಾ ಸಚಿವ ಅಂಗಾರ, ತೋಟಗಾರಿಕಾ
ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.