ಸಾವಿರಾರು ಮಕ್ಕಳ ಬದುಕಿಗೆ ನೆರವು
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಭಿವೃದ್ದಿಗೆ ಸಹಕಾರ
ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಕ್ಷಣ ಅಭಿವೃದ್ದಿ-ಆರಗ ಭರವಸೆ
ವಿಶೇಷ ಚೇತನ ಸಂಸ್ಥೆಗಳಿಗೆ ಸಹಕಾರ ಮಾಡದಿದ್ದರೆ ನಮ್ಮನ್ನು ಮನುಷ್ಯರು ಎಂದು ಹೇಳಲು ಸಾಧ್ಯವಿಲ್ಲ. ಈ ಶಾಲೆಗೆ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ. ಜಿಲ್ಲಾಧಿಕಾರಿ ಇಲ್ಲಿಗೆ ಕರೆಸಿ ತಕ್ಷಣವೇ ಇಲ್ಲಿನ ಅಭಿವೃದ್ಧಿ ಕೆಲಸದ ಬಗ್ಗೆ ಸಂಸ್ಥೆಯೊಂದಿಗೆ ಚರ್ಚಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ವಿಕಲಚೇತನ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸೊಪ್ಪುಗುಡ್ಡೆಯ ಸರ್ಕಾರಿ ಕಿರಿಯ
ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಹುಟ್ಟಿಕೊಂಡಿರುವ ಮಾತೃ ವಾತ್ಸಲ್ಯ ಸೇವಾ ಸಂಸ್ಥೆ ಉದ್ಘಾಟಿಸಿ ಮಾತನಾಡಿದರು.
ಸೊಪ್ಪುಗುಡ್ಡೆ ರಾಘವೇಂದ್ರ ಮಾತನಾಡಿ ಶಾಲೆಯ ಮೇಲಿನ ಅಭಿಮಾನವನ್ನು ಶ್ಲಾಘಿಸಿದರು. ನಂತರ ರಾಷ್ಟ್ರ ಪ್ರಶಸ್ತಿ ವಿಜೇತರಾದ ಕುಮಾರ್ ಹೆಚ್.ಸಿ. ಮತ್ತು ಸಿಬ್ಬಂದಿ ವರ್ಗದವರ ಸೇವೆಯನ್ನು ಪ್ರಶಂಸಿದರು.
ಶಿಕ್ಷಕ ಕುಮಾರ್ ಅವರು ಮಾತನಾಡಿ, ಶಾಲೆಯಲ್ಲಿ ನಡೆಯುತ್ತಿರುವ ವಿಶೇಷ ಅಗತ್ಯವುಳ್ಳ ಮಕ್ಕಳ ಕಾರ್ಯವೈಖರಿಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಹಾಗೂ ಇಂತಹ ಮಕ್ಕಳ ಪೋಷಕರು ಅನುಭವಿಸುತ್ತಿರುವ ನೋವು ಸಂಕಟದ ಬಗ್ಗೆ ತಿಳಿಸಿದಾಗ ಎಲ್ಲ
ಕಣ್ಣಾಲಿಗಳು ತುಂಬಿ ಬಂದವು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷೆ ಅಮೃತ ಜಿ ವಹಿಸಿದ್ದರು. ಮಾತೃ ವಾತ್ಸಲ್ಯ ಅಧ್ಯಕ್ಷರಾದ ಮೀನಾಕ್ಷಿ
ತಮ್ಮ ಸಂಸ್ಥೆಗೆ ಜಾಗದ ಕೊರತೆ ಇರುವುದರಿಂದ ಜಾಗ ಕೊಡಿಸಿಕೊಡಬೇಕಾಗಿ ಗೃಹ ಸಚಿವರಿಗೆ ಮನವಿ
ಸಲ್ಲಿಸಿದರು. ಶಾಲಾ ಶಿಕ್ಷಕರಾದ ಶಿವಪುತ್ರ, ಗಾಯತ್ರಿ ಟಿ.ಜಿ. ಟೀಕಪ್ಪ, ಪೋಷಕರು, ಮಕ್ಕಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮೀನಾಕ್ಷಿ, ಅಮೃತ ಜಿ, ಪದ್ಮಾವತಿ ಇದ್ದರು.