ಪೊಲೀಸರು ಕಕ್ಕಾಬಿಕ್ಕಿ...!
ಮೂರು ದಿನಗಳ
ನಂತರ ಪ್ರಕರಣ ದಾಖಲು
ಗೃಹಸಚಿವರೇ ನಿಮ್ಮ ತವರಿನಲ್ಲಿದೆ ಆತಂಕ
ಶೂಟ್ ಔಟ್ ಪ್ರಕರಣ ಹೆಚ್ಚಾಗುತ್ತಿರುವ ನಡುವೆ ತಾಲ್ಲೂಕಿನ ಮಂಡಗದ್ದೆಯಲ್ಲಿ ನಾಡ ಬಂದೂಕು ಕಳ್ಳತನ ಪ್ರಕರಣ ತೀರ್ಥಹಳ್ಳಿ ಕ್ಷೇತ್ರವನ್ನೇ ಬೆಚ್ಚಿಬೀಳಿಸಿದೆ. ರಾತ್ರೋ ರಾತ್ರಿ ಒಂಟಿ ಮನೆಗಳ ಮೇಲೆ ಟಾರ್ಗೆಟ್ ಮಾಡುತ್ತಿರುವ ಕಳ್ಳ ಕದೀಮರ ಗ್ಯಾಂಗ್ ಆಸ್ತಿ ದಾಖಲೆ, ಒಡವೆ, ನಗದು ಅಪಹರಿಸುತ್ತಿದ್ದವರು ಹೊಸ ಚಾಳಿಗೆ ಕೈಹಾಕಿದ್ದಾರಾ ಎಂಬ ಅನುಮಾನ ಶುರುವಾಗ ತೊಡಗಿದೆ.
ವಯೋವೃದ್ದರು
ವಾಸಿಸುತ್ತಿರುವ ಮನೆಗಳ ಮೇಲೆಯೇ ಇವರ ಕೆಂಗಣ್ಣು ಬೀಳುತ್ತಿದ್ದು ಕುಟುಂಬದವರು ಜಾಗ್ರತೆ ವಹಿಸಬೇಕಾಗಿದೆ.
ಅದರಲ್ಲೂ ಬಂದೂಕಿನಂತಹ ಸೂಕ್ಷ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತಹ ಸನ್ನಿವೇಶ ತಾಲ್ಲೂಕಿನಲ್ಲಿ
ಇತ್ತೀಚೆಗೆ ಸೃಷ್ಟಿಯಾಗಿದೆ. ಮೊನ್ನೆ ನೇಗಿಲಯೋಗಿ ಪ್ರಕರಣದಲ್ಲೂ ತೀರ್ಥಹಳ್ಳಿ ತಾಲ್ಲೂಕಿನ ಬಂದೂಕು
ಬಳಕೆಯಾಗಿದೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ. ಈ ನಡುವೆ ಮಂಡಗದ್ದೆ ಹೊಬಳಿಯ ಪುಟ್ಟೋಡ್ಲು ಹೆಚ್.ಟಿ.
ರಾಮಕೃಷ್ಣ (73) ಎಂಬುವವರಿಗೆ ಸೇರಿದ ಕಳ್ಳರು ಯಾಮಾರಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಗೃಹಸಚಿವರ ಕ್ಷೇತ್ರದಲ್ಲೇ ಬಂದೂಕು ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಮಧ್ಯೆ ಪ್ರಕರಣ ಕೇಳುತ್ತಿದ್ದಂತೆ ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದು ಇನ್ನೇನು ಅಪಾಯ ಜರುಗಲಿದೆ ಎಂಬ ಆತಂಕ ನಿರ್ಮಾಣವಾಗಿದೆ. ಅಲ್ಲದೇ ಕೇಸು ಯಾವ ಕಾಯ್ದೆಯಡಿಯಲ್ಲಿ ದಾಖಲು ಮಾಡಿಕೊಳ್ಳಬೇಕು ಎಂಬ ಗೊಂದಲ ಏರ್ಪಟ್ಟಿತ್ತು. ಕೃಷಿ ಜಮೀನು ಹೊಂದಿರುವ ರೈತರು ಬೆಳೆ ಸಂರಕ್ಷಣೆಗಾಗಿ ನಾಡ ಬಂದೂಕು ಬಳಕೆ ಮಾಡಿಕೊಳ್ಳುತ್ತಿದ್ದು ಇಂತಹದ್ದೊಂದು ಪ್ರಕರಣ ರೈತರಲ್ಲೂ ಬಾರೀ ಆತಂಕಕ್ಕೆ ಕಾರಣವಾಗಿದೆ.