ಇನ್ನೇನಾಗುತ್ತೋ… ಗೊತ್ತಿಲ್ಲ…?
ಕೇಸ್ ಸ್ಟ್ರಾಂಗ್ ಆಗುತ್ತೋ… ವೀಕಾಗುತ್ತೋ…
ಹೋಂ ಮಿನಿಸ್ಟರ್ ಕ್ಷೇತ್ರದಲ್ಲಿ ಪೊಲೀಸರು ವಿಕೇ…?
ಕೊಲೆ, ಮಾರಣಾಂತಿಕ ಹಲ್ಲೆ, ಕಳವು, ದರೋಡೆ, ಗನ್ ಶೂಟ್, ಅಕ್ರಮ ಮರಳು, ಅಕ್ರಮ ಕಲ್ಲು, ಹೆಂಡ, ಮಟ್ಕಾ, ಗಾಂಜಾ, ಇಸ್ಪೀಟು ದಂಧೆಗಳು ಎಗ್ಗಿಲದೆ ನಡುತ್ತಿದೆ. ಇಷ್ಟೆಲ್ಲ ಜ್ವಲಂತ ಸಮಸ್ಯೆಗಳು ತಾಲ್ಲೂಕು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದ್ದರು ಯಾವುದೋ ಕಠಿಣ ಕ್ರಮ ಜರುಗುತ್ತಿಲ್ಲ ಎಂಬ ಅನುಮಾನ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ಹೋಂ ಮಿನಿಸ್ಟರ್ ಕ್ಷೇತ್ರದಲ್ಲೇ ಪೊಲೀಸರು ವೀಕ್ ಆದ್ರಾ ಎಂಬ ಪ್ರಶ್ನೆ ಉದ್ಬವಿಸುತ್ತಿದೆ.
ಮಹಾಲಯ ಅಮಾವಾಸ್ಯೆಯ ಕತ್ತಲೆ ಕಳೆದು ನವರಾತ್ರಿ ಆರಂಭವಾಗುತ್ತಿದ್ದಂತೆ ತೀರ್ಥಹಳ್ಳಿ ತಾಲ್ಲೂಕಿನ ಮೃಗಾವಧೆಯ ಬೆಳ್ಳಿಕೊಡುಗೆ ರಾಜು (45) ಬೆಳ್ಳಂಬೆಳಗ್ಗೆ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೊನೆಯ ಕ್ಷಣದಲ್ಲಿ ಮೃತ ವ್ಯಕ್ತಿ ಹೆಸರು ಹೇಳಿರುವುದು ಆರೋಪಿಗಳಿಗೆ ಕಂಟಕವಾಗಲಿದೆಯೇ? ಸ್ಥಳದಲ್ಲಿ ಗೃಹಸಚಿವರ ಆಪ್ತರು ಜಾಂಡಾ ಊರಿರುವುದು ತನಿಖೆ ದಿಕ್ಕು ತಪ್ಪುತ್ತಾ ಎಂಬ ಅನುಮಾನ ವ್ಯಾಪಕವಾಗುತ್ತಿದೆ.
ರಾಜು ಮೂರು ದಿನಗಳಿಂದ ಮನೆಗೆ ಬಂದಿರಲ್ಲಿಲ್ಲ. ಸೋಮವಾರ ಬೆಳಿಗ್ಗೆ
ಏಕಾಏಕಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಸಾಯುವ ಭಯದಲ್ಲಿ ಮನೆ ಮುಂಭಾಗ ತಂದು ಎಸೆದಿರುವುದು
ಜೀವಕ್ಕೆ ಬೆಲೆ ಇಲ್ಲವೇ ಎಂಬ ಬೇಸರ ಗ್ರಾಮಸ್ತರಲ್ಲಿ ಮೂಡುತ್ತಿದೆ. ಹಲ್ಲೆ ತೀವ್ರತೆಯಿಂದ ಕುಟುಂಬ
ಸದಸ್ಯರ ಮುಂದೆ ಅಸುನೀಗಿರುವುದು ಆತಂಕ ಸೃಷ್ಟಿಸಿದೆ. ಯಾವ ಕಾರಣಕ್ಕಾಗಿ ಕೊಲೆ, ಹಲ್ಲೆ ನಡೆದಿದೆ ಎಂಬುದು ತಿಳಿದುಬಂದಿಲ್ಲ.
ಬಡತನದಲ್ಲಿ ಜೀವನ ನಡೆಸಿದ್ದ ಕುಟುಂಬದವರಿಗೆ ನ್ಯಾಯ ಸಿಗುತ್ತಾ ಎಂಬ ಪ್ರಶ್ನೆ ಎದುರಾಗಿದೆ. ಪ್ರಕರಣ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಇನ್ನೇನು ಮಾಡುತ್ತಾರೆ, ಕೇಸು ಸ್ಟ್ರಾಂಗ್ ಆಗುತ್ತೋ ಅಥವಾ ವೀಕ್ ಆಗುತ್ತೋ ಎಂಬ ಭಯ ಆವರಿಸಿದೆ.
ತನಿಖೆ ನಡೆಸುತ್ತಿರುವ ಪೊಲೀಸರು |