ಶೃಂಗೇರಿ-ಆಗುಂಬೆ-ತೀರ್ಥಹಳ್ಳಿ ರಸ್ತೆ ಸಂಪರ್ಕ ಕಡಿತ
ಕಳೆದ ಕೆಲವು ದಿನಗಳಿಂದ ಮಲೆನಾಡು ಭಾಗದಲ್ಲಿ ಅಬ್ಬರಿಸುತ್ತಿರುವ ಭಾರೀ ಮಳೆಯಿಂದಾಗಿ ದಿನಕ್ಕೊಂದು ಅವಘಡಗಳು ಸಂಭವಿಸುತ್ತಿವೆ. ಧಾರಾಕಾರ ಮಳೆಗೆ ಶೃಂಗೇರಿ- ಆಗುಂಬೆ- ತೀರ್ಥಹಳ್ಳಿ ಮಾರ್ಗದ ನೇರಳೆಕೂಡಿಗೆ ಬಳಿ ರಸ್ತೆ ಕುಸಿದು ಸಂಚಾರ ಸಂಪೂರ್ಣ ಬಂದ್ ಆಗಿದೆ.
ಮಳೆಯಿಂದಾಗಿ ಸುಮಾರು 200 ಅಡಿಗಳಷ್ಟು ರಸ್ತೆ ಕೊಚ್ಚಿ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದರಿಂದಾಗಿ ಶೃಂಗೇರಿ- ಆಗುಂಬೆ ಮಾರ್ಗದ ಸಂಚಾರ ಸಂಪೂರ್ಣ ತಪ್ಪಿಹೋಗಿದೆ.
ಈ ಮಾರ್ಗದ ಬದಲಿಯಾಗಿ ಶೃಂಗೇರಿ - ಕೆಲ್ಲಾರ್ - ಮೀಗಾ ಮಾರ್ಗವಾಗಿ ಬೇಗಾರ್ ಮೂಲಕ ಆಗುಂಬೆ ಅಥವಾ ಶೃಂಗೇರಿ - ಕಾವಡಿ - ಬಿಲಗದ್ದೆ - ಶಾನುವಳ್ಳಿ - ಮಾವಿನಕಟ್ಟೆ - ಬೇಗಾರ್ ಮಾರ್ಗವಾಗಿ ಆಗುಂಬೆ ಗೆ ಸಂಚರಿಸಲು ಸೂಚಿಸಲಾಗಿದೆ.