*ವಿಶ್ವೇಶ್ವರಯ್ಯ ಮರಿಮಗ ಶಶಾಂಕ್ ರಿಂದ ಸಂದರ್ಶನ*
ಬೆಂಗಳೂರಿನ ಪ್ರತಿಷ್ಠಿತ ಬಹು ರಾಷ್ಟ್ರೀಯ ಕಂಪನಿಯಾದ "MAG India industrial automation (ಮ್ಯಾಗ್ ಇಂಡಿಯಾ ಇಂಡಸ್ಟ್ರಿಯಲ್ ಆಟೋಮೇಶನ್) ತೀರ್ಥಹಳ್ಳಿಯ ಸಹ್ಯಾದ್ರಿ ಪಾಲಿಟೆಕ್ನಿಕ್ ನಲ್ಲಿ ಬುಧವಾರ ಅಂತಿಮ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ನಡೆಸಿದ್ದು. ಈ ಸಂದರ್ಶನಕ್ಕೆ ಕಂಪನಿಯ ಪ್ರಧಾನ ನಿರ್ದೇಶಕ ಸರ್ ಎಂ ವಿಶ್ವೇಶ್ವರಯ್ಯನವರ ಮರಿಮಗ ಶಶಾಂಕ್ ಖುದ್ದಾಗಿ ಸಂದರ್ಶನ ನಡೆಸಿದರು. ಜೊತೆಯಲ್ಲಿ ಕಂಪನಿಯ ಸಿಬ್ಬಂದಿ ವಿಭಾಗದ ಮುಖ್ಯಸ್ಥರಾದ ಸೆಲ್ವಿ ಮೇಡಂ ಕೂಡ ಹಾಜರಿದ್ದರು.ಕಾಲೇಜಿನ ಶೇಷಗಿರಿ ಆಚಾರ್ ಮತ್ತು ಸಾತ್ವಿಕ್ ಹೆಚ್.ಆರ್. ಇಬ್ಬರನ್ನು ಕಂಪನಿಗಾಗಿ ಆಯ್ಕೆ ಮಾಡಿ ಅವರಿಗೆ ಅಪಾಯಿಂಟ್ಮೆಂಟ್ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಿನ್ಸಿಪಾಲ್ ಶಂಕರಪ್ಪ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಸುಭಾಷ್ ಚಂದ್ರ, ಹಾಗೂ ಉದ್ಯೋಗಾಧಿಕಾರಿಯಾದ ಎಂ.ಬಿ. ನಿತಿನ್ ಹೆಗ್ಡೆ ಉಪಸ್ಥಿತರಿದ್ದರು.ಕಳೆದ ವಾರ ಶಿವಮೊಗ್ಗದಲ್ಲಿ ನಡೆದ ಬೆಂಗಳೂರಿನ ಟೊಯೋಟೊ ಕಂಪನಿಯ ಕ್ಯಾಂಪಸ್ ಸಂದರ್ಶನದಲ್ಲೂ ಕೂಡ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದರು.