11ನೇ ತಿರುವಿನಲ್ಲಿ ಜೆಸಿಬಿ ಕಾರ್ಯಾಚರಣೆ
ಬೆಳ್ಳಂಬೆಳಗ್ಗೆ ಘಾಟಿ ಸಂಚಾರ ಬಂದ್
ಶಿವಮೊಗ್ಗ ಉಡುಪಿ ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿ 11ನೇ ತಿರುವು ಕುಸಿದಿದ್ದು ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ವ್ಯಾಪಕವಾಗಿ ಮಳೆ ಸುರಿದ್ದು ಮಳೆಯ ಆಘಾತಕ್ಕೆ ಮರದೊಂದಿಗೆ ಧರೆ ಕುಸಿದಿದೆ. ಲೋಕೋಪಯೋಗಿ ಇಂಜಿನಿಯರ್ ನವೀನ್ ರಾಜ್, ಶಶಿಧರ್ ಬೆಳಗ್ಗಿನಿಂದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಸಂಚಾರ ಸಂಪೂರ್ಣ ಬಂದ್ ಆಗಿದೆ. ಘಾಟಿ ಕೆಳಗೆ ಸೋಮೇಶ್ವರ ಚೆಕ್ಪೋಸ್ಟ್ ಬಳಿಯಲ್ಲಿಯೇ ವಾಹನಗಳನ್ನು ತಡೆಯಲಾಗುತ್ತಿದೆ. ಮೇಲ್ಬಾಗ ಆಗುಂಬೆ ಘಾಟಿ ಚೆಕ್ಪೋಸ್ಟ್ ಬಳಿಯೇ ವಾಹನಗಳನ್ನು ವಾಪಸ್ ಕಳುಹಿಸಲಾಗುತ್ತಿದೆ.