ಗಾಂಧಿ ಚೌಕದಲ್ಲಿ ವ್ಯಕ್ತಿಯೋರ್ವನಿಂದ ಹೈಡ್ರಾಮ
ಹಸುಗೂಸ ಎತ್ತಿ ಹಿಡಿದು ಮಳೆಯಲ್ಲಿ ಪ್ರತಿಭಟನೆ
ಕಾರಿನಲ್ಲಿ ವಾಸವಾದ ಕುಟುಂಬಕ್ಕೆ ಕಿರುಕುಳ...?
ಮಹಿಳಾ ಮತ್ತು ಮಕ್ಕಳ ಆಯೋಗ ಎಲ್ಲಿ...?
ಬಾಲೆಗೆ ಛತ್ರಿ ಹಿಡಿದ ಮಹಾತಾಯಿ
ಪೊಲೀಸರಿಂದ ತನ್ನ ಧಾರ್ಮಿಕ ಸ್ವಾತಂತ್ರ್ಯಕ್ಕೆ ಆಡ್ಡಿಯಾಗುತ್ತಿದೆ. ಬೇಕೆಂದು ಕಿರುಕುಳ ನೀಡುತ್ತಿದ್ದಾರೆ ಎಂದು ಮಾರ್ಕ್ ಮಿನೇಜಸ್ ಭಟ್ಟಿ ಎಂಬ ವ್ಯಕ್ತಿ ತೀರ್ಥಹಳ್ಳಿಯ ಗಾಂಧಿ ಚೌಕದಲ್ಲಿ ಹಸುಗೂಸನ್ನು ಸುರಿಯುವ ಮಳೆಯಲ್ಲಿ ಒಂದೇ ಕೈಯಲ್ಲಿ ಹಿಡಿದು ತನ್ನ ಪತ್ನಿಯೊಂದಿಗೆ ಪ್ರತಿಭಟಿಸಿದ ಘಟನೆ ನಡೆದಿದೆ. ಈ ವ್ಯಕ್ತಿ ತನ್ನ ಟಾಟ ನ್ಯಾನೋ ಕಾರಿನ ಮೇಲೆ ಅಲ್ಲಾಹ್ನ ಸಂದೇಶ ಸಾರುವ ಘೋಷಣೆಗಳನ್ನು ಬರೆಸಿಕೊಂಡು ತಿರುಗಾಡುತ್ತಿದ್ದರು. ಅಲ್ಲದೇ ಹೋಟೆಲ್ ಅಲಂಕಾರ್ ಎದುರಿನ ಪಾರ್ಕಿಂಗ್ ಸ್ಥಳದಲ್ಲಿ ಹಲವು ಸಮಯದಿಂದ ಆ ಕಾರನ್ನು ಪಾರ್ಕ್ ಮಾಡಲಾಗಿತ್ತು. ಇದು ಭಜರಂಗದಳದ ಓರ್ವ ಕಾರ್ಯಕರ್ತನ ಕಣ್ಣಿಗೆ ಬಿದ್ದು ಆತ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದನಲ್ಲದೇ ಪೊಲೀಸರ ಗಮನಕ್ಕೂ ತಂದಿದ್ದ.
ಭಾನುವಾರ ಆ ಕಾರನ್ನು ಅಲ್ಲಿಂದ ತೆರವುಗೊಳಿಸಲು ಮುಂದಾದಾಗ ತೀವ್ರ ಪ್ರತಿರೋಧ ತೋರಿದ ಆ ವ್ಯಕ್ತಿಯನ್ನು ಬಂಧಿಸಲು ಬಂದಿದ್ದ ಪೊಲೀಸರು ತಬ್ಬಿಬ್ಬಾದರು, ವರದಿಗಾರರು ಆತನನ್ನು ಪಶ್ನಿಸಿದಾಗ ಇವರು ನನ್ನ ಧಾರ್ಮಿಕ ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ. ಕಾರಿನಲ್ಲಿ ನನ್ನ ಸಂಸಾರವೇ ಇದೆ. ನನಗೆ ದೇವರ ಬಗ್ಗೆ ನಂಬಿಕೆ ಇದೆ. ನನ್ನ ನಂಬಿಕೆಯನ್ನು ಪ್ರಚಾರ ಮಾಡುತ್ತಾ ಯಾರಾದರೂ ಸಹೃದಯರು ಕೊಡುವ ಹಣದಿಂದ ಬದುಕುತ್ತಿರುವೆ ಇದು ತಪ್ಪು ಎಂದು ಯಾವ ಕಾನೂನು ಹೇಳಿದೆ ಅದನ್ನು ಪೊಲೀಸರು ಸಾಭೀತು ಪಡಿಸಲು ಸವಾಲು ಹಾಕಿದರು.