ಸದ್ಯ ಆರಗ ಜ್ಞಾನೇಂದ್ರ ಜಿಲ್ಲೆಯ ಪ್ರಭಾವಿ ರಾಜಕಾರಣಿ
ಸುಳ್ಳುಗಳು ಬಿಟ್ಟರೆ ಏನೂ ಮಾಡುವುದಿಲ್ಲ…!
ತೀರ್ಥಹಳ್ಳಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಲೆನಾಡು
ರೈತ ಹೋರಾಟ ಸಮಿತಿ ಮುಖಂಡ ತೀ.ನಾ. ಶ್ರೀನಿವಾಸ್ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಗೃಹಸಚಿವರ ಮೇಲೆ
ತೀವ್ರ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಪ್ರಭಾವಿ ನಾಯಕರು ತಮ್ಮ ಮಕ್ಕಳ ಭವಿಷ್ಯ ರೂಪಿಸಲು ಮುಂದಾಗಿದ್ದಾರೆ.
ಉಸ್ತುವಾರಿ ಸಚಿವರು ಕಾಣಿಸಿಕೊಳ್ಳುವುದಿಲ್ಲ. ಸದ್ಯ ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಯಾಗಿರುವ ಗೃಹಸಚಿವ
ಆರಗ ಜ್ಞಾನೇಂದ್ರ ಮೊಬೈಲ್ನಲ್ಲಿ ಸುಳ್ಳು ಭರವಸೆ ನೀಡುತ್ತಿದ್ದಾರೆ. ಮುಳುಗಡೆ, ಬಗರ್ ಹುಕುಂ ಸಮಸ್ಯೆಗಳ
ಮಾಹಿತಿ ಇದ್ದರು ಪರಿಹಾರ ಒದಗಿಸಲು ವಿಫಲರಾಗಿದ್ದಾರೆ.
ಬಗರ್ ಹುಕುಂ ಸಾಗುವಳಿ ಸಕ್ರಮಕ್ಕೆ ಸಲ್ಲಿಸಿದ್ದ 80 ಸಾವಿರ ರೈತರ ಅರ್ಜಿ
ತಿರಸ್ಕೃತಗೊಳ್ಳಲಿದೆ. ಸರ್ಕಾರದ ಹಂತದ ಅರಣ್ಯ, ಕಂದಾಯ ಇಲಾಖೆಯಿಂದ ಸುಮಾರು 10 ಸಭೆಗಳು ನಡೆದಿದೆ.
8 ತಿಂಗಳು ಕಳೆದರು ಸಭೆ ನಿರ್ಣಯ ಪಡೆದಿಲ್ಲ. ಹಿಂದಿನ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ವರಾಹಿ,
ಚಕ್ರ, ಸಾವೇಹಕ್ಲು, ಶರಾವತಿ ಮುಳುಗಡೆ ಸಂತ್ರಸ್ತರ ವರದಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಭೂಮಿ ಹಕ್ಕು ಸಿಕ್ಕಿಲ್ಲ. ಎಲ್ಲಾ ಸಮಸ್ಯೆಗಳನ್ನು ಗಾಳಿಗೆ ತೂರಿ
ರಾಜಕೀಯಕ್ಕಾಗಿ ಮುಸ್ಲಿಂ-ಹಿಂದೂ ಸಮೂದಾಯದ ನಡುವೆ ಕೋಮು ಸೌಹಾರ್ದ ಹಾಳು ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಬೆಳೆಸುತ್ತಿರುವ ಸಂಘನೆಗಳು ಸಮಾಜದ ಸ್ವಾಸ್ಥ್ಯ ಹಾಳು
ಮಾಡುತ್ತಿವೆ. ಹಿಜಾಬ್, ಪಠ್ಯ, ಆಜಾನ್ ನಂತಹ ಸಮಸ್ಯೆಗಳನ್ನು ಎತ್ತುಕಟ್ಟುವ ಕೆಲಸದಲ್ಲಿ ತೊಡಗಿವೆ.
ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳೇ ಆಗುತ್ತಿಲ್ಲ ಎಂದರು. ಪತ್ರಿಕಾಗೋಷ್ಟಿಯಲ್ಲಿ ಮಲೆನಾಡು ರೈತ
ಹೋರಾಟ ಸಮಿತಿ ರಘು ವಿಠ್ಠಲ, ಗೋಪಾಲ ನಾಯ್ಕ್, ಸುಧೀರ್, ಗಂಗಾಧರ್ ಇದ್ದರು.
