ಮೋದಿ ಅವರ ಜೊತೆ ಬದಲು ಮನೆಯಲ್ಲೇ ಯೋಗಾಸನ
ನೆಟ್ಟಿಗರ ಟ್ರೋಲ್ಗೆ ಗುರಿಯಾದ ಆರಗ ಜ್ಞಾನೇಂದ್ರ
ಅವಗಣನೆಗೆ ತೀರ್ಥಹಳ್ಳಿ ಕ್ಷೇತ್ರದಲ್ಲಿ ಅಸಮಾಧಾನ

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಾರ್ವಜನಿಕ ಯೋಗಾಸನ. ಗೃಹಸಚಿವ ಆರಗ ಜ್ಞಾನೇಂದ್ರರಿಂದ ಮನೆಯಲ್ಲಿನ ಯೋಗಾ ಭಂಗಿ.
![]() |
| ಮಂಗಳವಾರ ವಾರ್ತಾ ಇಲಾಖೆ ವತಿಯಿಂದ ರಾಜ್ಯದ ಪ್ರಮುಖ ಪತ್ರಿಕೆಗಳಿಗೆ ನೀಡಿದ ಜಾಹೀರಾತು. |
ಜಾಹೀರಾತಿನ ಘನ ಉಪಸ್ಥಿತಿ ಎಂಬಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರ
ಹೆಸರು, ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಕೇಂದ್ರ ಸಚಿವರುಗಳಾದ ಪ್ರಹಲ್ಲಾದ ಜೋಷಿ, ಶೋಭ ಕರಂದ್ಲಾಜೆ,
ಭಗವಂತ ಖೂಬಾ, ಎ.ನಾರಾಯಣ ಸ್ವಾಮಿ ಮತ್ತು ಮುಖ್ಯ ಅತಿಥಿಗಳ ಪಟ್ಟಿಯಲ್ಲಿ ಸಚಿವರುಗಳಾದ ಆರ್. ಆಶೋಕ್,
ಡಾ. ಅಶ್ವಥ್ನಾರಾಯಣ, ಎಸ್.ಟಿ. ಸೋಮಶೇಖರ್, ಡಾ.ಸುಧಾಕರ್, ವಿ ಸುನಿಲ್ ಕುಮಾರ್, ಜೆ.ಸಿ. ಮಾಧೂಸ್ವಾಮಿ,
ಆನಂದಸಿಂಗ್, ಕೋಟಾ ಶ್ರೀನಿವಾಸ ಪೂಜಾರಿ, ಬಿ.ಸಿ. ನಾಗೇಶ್, ಮಾಜಿ ಸಿಎಂ ಸಿದ್ದರಾಮಯ್ಯ, ಮೈಸೂರು
ಸಂಸದ ಪ್ರತಾಪ್ ಸಿಂಹ, ಮಾಜಿ ಸಿಎಂ ಯಡಿಯೂರಪ್ಪ ಹೆಸರುಗಳು ಕಾಣಿಸಿಕೊಂಡಿದೆ.
ವಿಶೇಷವೆಂದರೆ ಶಿಷ್ಠಾಚಾರದ ಪ್ರಕಾರ ನೋಡಿದರೂ ಸಿಎಂ ನಂತರದಲ್ಲಿ
ಕಾಣಿಸಿಕೊಳ್ಳಬೇಕಾಗಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರರ ಹೆಸರೇ ನಾಪತ್ತೆಯಾಗಿದೆ. ಇದೇನು ಉದ್ದೇಶ
ಪೂರ್ವಕವೋ ಅಥವಾ ಆಕಸ್ಮಾತ್ ಆದ ಪ್ರಮಾದವೋ ಎಂಬುದನ್ನು ಈ ಜಾಹೀರಾತು ರೂಪಿಸಿದವರೇ ಹೇಳಬೇಕಾಗಿದೆ.
ವಾಸ್ತವವಾಗಿ ಆರಗ ಜ್ಞಾನೇಂದ್ರ ರಾಜ್ಯದ ಮೊದಲ ಸಾಲಿನ ಹಿರಿಯ ಬಿಜೆಪಿ
ಸಾಲಿನ ನಾಯಕರಲ್ಲಿ ಒಬ್ಬರು. ಒಂದು ಕಾಲದಲ್ಲಿ ಶಿವಮೊಗ್ಗದಲ್ಲಿ ಬಿಜೆಪಿಯ ಎಲ್ಲಾ ಹುರಿಯಾಳುಗಳು ಸೋತಾಗಲೂ
ತೀರ್ಥಹಳ್ಳಿಯಲ್ಲಿ ಗೆದ್ದಿದ್ದ ಜನಪ್ರೀಯ ರಾಜಕಾರಣಿ. ಗೃಹಮಂತ್ರಿಯಾದ ಆರಂಭದ ಕಾಲದಲ್ಲಿ ಅದರ ಆಗಾಧತೆ
ಮತ್ತು ವ್ಯಾಪ್ತಿಯ ಕಾರಣ ನಿಭಾಯಿಸುವಲ್ಲಿ ತಬ್ಬಿಬ್ಬಾಗಿದ್ದರೂ ಇಲ್ಲಿಯ ತನಕ ಕೈ ಸ್ವಚ್ಚವಾಗಿರಿಸಿಕೊಂಡಿರುವುದು
ಎಷ್ಟೇ ವಿವಾಧಗಳು ಬುಗಿಲೆದ್ದರೂ ಅವರ ಸ್ಥಾನಕ್ಕಂತೂ ಚ್ಯುತಿ ತಂದಿಲ್ಲ. ಹೀಗಿರುವಾಗ ಓರ್ವ ಗೃಹಮಂತ್ರಿಯನ್ನು
ದೂರವಿಟ್ಟು ಈ ಜಾಹೀರಾತು ಹೊರಬರಲು ಏನು ಕಾರಣ ಎಂಬುದು ಮುಂದೆ ಜಗಜ್ಜಾಹೀರಾಗಬೇಕಾಗಿದೆ.
ಅಲ್ಲದೇ ಆಹ್ವಾನಿತರಲ್ಲಿ ಹೆಸರು ಕೈಬಿಟ್ಟ ಕಾರಣ ಮೈಸೂರಿನಲ್ಲಿ ನರೇಂದ್ರ ಮೋದಿ ಅವರೊಂದಿಗೆ ಯೋಗಾಸನ ಪ್ರದರ್ಶನ ನೀಡಬೇಕಿದ್ದ ಗೃಹಮಂತ್ರಿ ಆರಗ ಜ್ಞಾನೇಂದ್ರ ಬೆಂಗಳೂರಿನ ಸ್ವಗೃಹದಲ್ಲಿ ಮಾಡಿರುವ ಯೋಗಾ ಭಂಗಿ ವಿರೋಧ ಪಕ್ಷ ಹಾಗೂ ನೆಟ್ಟಿಗರ ಟ್ರೋಲ್ಗೆ ಗುರಿಯಾಗಿದೆ.
