ದೆಹಲಿಯಲ್ಲಿ ಪಕ್ಷಕ್ಕೆ ಎಂಟ್ರಿ ಕೊಟ್ಟ ನಾಯಕರು
ತೀರ್ಥಹಳ್ಳಿಯಲ್ಲಿ ಹೊಸ ರಾಜಕೀಯದ ಕಾವು...
ಅವಳಿ ಜಿಲ್ಲೆಯ ರಾಯಭಾರಿ ಆಗುವರೇ..?
ಸುಪ್ರೀಂ ಕೋರ್ಟ್ ವಕೀಲ ತೀರ್ಥಹಳ್ಳಿ
ತಾಲೂಕಿನ ಸಾಲೂರು ಗ್ರಾಮದ ಸಾಲೂರು ಶಿವಕುಮಾರ್ ಗೌಡ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಐ.ಬಿ. ಶಂಕರ್ ಮಗ ಹೆಸರಾಂತ
ವಕೀಲ ಐ.ಎಸ್. ತೇಜಸ್ವಿ ದೆಹಲಿಯಲ್ಲಿ
ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಕರ್ನಾಟಕ ಚುನಾವಣಾ ಪ್ರಭಾರಿ ದಿಲೀಪ್ ಪಾಂಡೆ ಸಮ್ಮುಖದಲ್ಲಿ ದೆಹಲಿಯ ಕಛೇರಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಅಧೀಕೃತವಾಗಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಯುವ ಅಧ್ಯಕ್ಷ ಪವನ್ ಉಪಸ್ಥಿತರಿದ್ದರು. ಈ ಇಬ್ಬರು ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಎರಡು ಅವಳಿ ಜಿಲ್ಲೆಯಲ್ಲಿ ಹೊಸ ರಾಜಕೀಯ ಸಂಚಲನಕ್ಕೆ ಸಾಕ್ಷಿಯಾಗಲಿದೆ ಎಂದು ದಿಲೀಪ್ ಪಾಂಡೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.
