ಯಕ್ಷಭೂಮಿ ಯಕ್ಷಗಾನ ಅಧ್ಯಯನ ಕೇಂದ್ರ ಆರಂಭಕ್ಕೆ ಕ್ಷಣಗಣನೆ
ಯಕ್ಷಗುರು ಶೈಲೇಶ್ ಸಾರಥ್ಯದ ಯಕ್ಷಭೂಮಿ ಕೇಂದ್ರ
![]() |
| ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಶೈಲೇಶ್ ಅವರಿಂದ ತರಬೇತಿ |
ಮಲೆನಾಡಿನಲ್ಲಿ ಅನೇಕರು ಯಕ್ಷಗಾನ ಆಸಕ್ತರಿದ್ದಾರೆ. ವಯಸ್ಸಿಗೆ ಮಿತಿ ಇಲ್ಲದೆ ತರಬೇತಿ ಪಡೆಯಬಹುದು. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನೀಡಲಾಗುತ್ತದೆ. ಅಲ್ಲದೆ ಶಿಕ್ಷಕರು, ಉಪನ್ಯಾಸಕರು, ರಂಗಭೂಮಿ, ಸಾಹಿತ್ಯಾಸಕ್ತರು ಪಾಲ್ಗೊಳ್ಳಬಹುದು. ಯಕ್ಷಭೂಮಿಯ ಉದ್ಘಾಟನೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಂಗಳಗಾರ್ ರಮೇಶ್ ಆಚಾರ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಂಗಾಯಣ ನಿರ್ದೇಶಕ ಸಂದೇಶ ಜವಳಿ, ರಂಗಶಿಕ್ಷಕ ಶ್ರೀಕಾಂತ್ ಕುಮುಟ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದಿದ್ದಾರೆ.
![]() |
| ಆನ್ಲೈನ್ನಲ್ಲಿ ಅರ್ಜಿ ಕಳುಹಿಸಲು Q R ಕೋಡ್ ಅಥವಾ ಲಿಂಕ್ ( https://forms.gle/EodEufT4mMojrTbH9 ) ಬಳಸಿ. |



.jpeg)