ಕರೆಕತ್ತಲು ಸೇತುವೆ ಬಳಿ ಅಪಘಾತ
ತಪ್ಪಿದ ಭಾರೀ ಅನಾಹುತ
ಯಡೂರು ಸಮೀಪದ ಸುಳುಗೋಡು ಗ್ರಾಮಪಂಚಾಯತ್ ವ್ಯಾಪ್ತಿಯ ಕರೆಕತ್ತಲು ಸೇತುವೆ ಬಳಿ ಮತ್ತೆ ಅಪಘಾತ ಸಂಭವಿಸಿದೆ.
ಬುಧವಾರ ಟಿಂಬರ್ ಲಾರಿಯೊಂದು ಕರೆಕತ್ತಲೆ ಸೇತುವೆ ಬಳಿ ಅಪಘಾತವಾಗಿ ಯಾವುದೇ ಪ್ರಾಣಾಪಾಯ ಆಗದೆ ಬಾರಿ ಅನಾಹುತ ತಪ್ಪಿದೆ.
ಕಳೆದ 15 ರಿಂದ 20 ದಿನಗಳಲ್ಲಿ ನಡೆದ ಮೂರನೇ ಅಪಘಾತ ಇದಾಗಿದೆ. ಕಡಿದಾದ ತಿರುವು ಹಾಗೂ ಯಾವುದೇ ಮುನ್ನೆಚ್ಚರಿಕಾ ಫಲಕ ಇಲ್ಲದೆ ಏಳೆಂಟು ವರ್ಷಗಳಿಂದ ಈ ಪ್ರದೇಶದಲ್ಲಿ 30 ರಿಂದ 40 ವಾಹನಗಳ ಅಪಘಾತವಾಗಿದೆ. ಒಂದು ತಿಂಗಳ ಹಿಂದೆ ಬಸ್ ಅಪಘಾತದಲ್ಲಿ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ಸ್ಥಳದಲ್ಲಿ ಹತ್ತು ಹಲವು ಸಾರಿ ಅಪಘಾತವಾಗುತ್ತಿದ್ದರು ಸಾರಿಗೆ, ಲೋಕೋಪಯೋಗಿ ಇಲಾಖೆ, ರಸ್ತೆ ಅಭಿವೃದ್ದಿ ನಿಗಮ, ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಯಡೂರು ಗ್ರಾಮಸ್ಥರು ದೂರುತ್ತಾರೆ. ಸೂಚನಾ ಫಲಕ ಅಳವಡಿಸಿ ರಸ್ತೆಯ ತಿರುವುಗಳನ್ನು ಸರಿಪಡಿಸಿ ಅಪಘಾತ ತಡೆಯಲು ಸಹಕಾರಿಯಾಗಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.