ತೀರ್ಥಹಳ್ಳಿಗೆ ಬರ್ತಾರೆ ಹುಲಿಯಾ...
ಪಾದಯಾತ್ರೆ ಅಂದಾಗ ನಕ್ಕುಬಿಟ್ರು ಕಿಮ್ಮನೆ…
ಸಾಂಸ್ಕೃತಿಕ ಸೌಹಾರ್ದ ಜಾಗೃತಿ ಪಯಣ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ… ಕೆಪಿಸಿಸಿ
ಅಧ್ಯಕ್ಷ ಡಿ.ಕೆ. ಶಿವಕುಮಾರ್… ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಜರ್
ಪಠ್ಯ ಪರಿಷ್ಕರಣೆಯಲ್ಲಿ ಸಮಿತಿಯಿಂದ ವೈಚಾರಿಕ, ಸಾಂಸ್ಕೃತಿಕ ಚಿಂತಕರಿಗೆ ಅವಮಾನ ಮತ್ತು
ಅಧ್ಯಕ್ಷ ರೋಹಿತ್ ಚಕ್ರತೀರ್ಥನಿಂದ ನಾಡಗೀತಗೆ ಆಗಿರುವ ಅಗೌರವ ಖಂಡಿಸಿ ತೀರ್ಥಹಳ್ಳಿಯಲ್ಲಿ ಬೃಹತ್ ಕಾಲ್ನಡಿಗೆ ಹಮ್ಮಿಕೊಳ್ಳಲಾಗಿದೆ. ʼಕುವೆಂಪು ವಿಶ್ವಮಾನವ ವೇದಿಕೆʼ ನೇತೃತ್ವದಲ್ಲಿ ಜೂನ್ 15ರ ಬುಧವಾರ ಬೆಳಿಗ್ಗೆ ಕುಪ್ಪಳ್ಳಿಯ ಕವಿಶೈಲ “ಸಾಂಸ್ಕೃತಿಕ ಸೌಹಾರ್ದ ಜಾಗೃತಿ ಪಯಣ” ಕಾಲ್ನಡಿಗೆಯನ್ನು ವಿವಿಧ ಜನಪರ ಸಂಘಟನೆಗಳ
ನೇತೃತ್ವದಲ್ಲಿ ನಡೆಯಲಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪತ್ರಿಕಾಗೋಷ್ಟಿಯಲ್ಲಿ
ತಿಳಿಸಿದ್ದಾರೆ.
ಜಾತಿ ಧರ್ಮದ ಆಧಾರದಲ್ಲಿ ಪಠ್ಯ ಪರಿಷ್ಕರಣೆ ಮಾಡಲಾಗಿದೆ. ಸಮಾಜದ ಆಗು ಹೋಗುಗಳ ಜ್ಞಾನ ಪಡೆಯಬೇಕಿದ್ದ ವಿದ್ಯಾರ್ಥಿಗಳನ್ನು ಕತ್ತಲಿಗೆ ತಳ್ಳುವ ಕೆಲಸ
ಶಿಕ್ಷಣ ಇಲಾಖೆಯಿಂದ ನಡೆಯುತ್ತಿದೆ. ಈಗಾಗಲೇ ಇಲಾಖೆಯಲ್ಲಿ ರಾಜ್ಯ, ಸಿಬಿಎಸ್ಸಿ, ಐಸಿಎಸ್ಸಿ ಪಠ್ಯ
ಕ್ರಮದಿಂದ ಗೊಂದಲ ಏರ್ಪಟ್ಟಿದೆ. ಶಿಕ್ಷಣ ವಿದ್ಯಾರ್ಥಿಗಳ ಸಮಾನತೆ ಕಸಿದುಕೊಳ್ಳುವಂತಾಗಿದೆ. ವ್ಯವಸ್ಥೆಯನ್ನು
ಸರಿಪಡಿಸುವ ಬದಲು ಕಲುಷಿತ ಮಾಡುವ ಪ್ರಯತ್ನ ನಡೆದಿದೆ. ಘಟನೆಯ ನಂತರ ಶಿಕ್ಷಣ ಸಚಿವ ನಾಗೇಶ್ ತಪ್ಪು ಒಪ್ಪಿಕೊಂಡಿದ್ದಾರೆ. ಆದರೆ
ಸರ್ಕಾರ ಚರ್ಕತೀರ್ಥ ಪರವಾಗಿ ನಿಂತಿದೆ. ಆಡಳಿತದ ಕೀಲಿ ಕೈ ಸರ್ಕಾರದ ಸ್ವಾಧೀನದಲ್ಲಿ ಇಲ್ಲ
ಎಂದು ಕುಟುಕಿದರು.
ಓರ್ವ ಸಾಹಿತಿ ಬರೆದಿದ್ದೆಲ್ಲಾ ಸಾಹಿತ್ಯ ಆಗುವುದಿಲ್ಲ. ಅದ್ಬುತವಾದ ಸಾಹಿತ್ಯ ರಚಿಸಿದವರು ಕೆಲವು
ಸಂದರ್ಭ ಯಶಸ್ವಿಯಾಗಿಲ್ಲ. ಸಾಹಿತ್ಯ ಎಂದಾಗ ಗ್ರಾಮೀಣ ಬದುಕು, ನಗರ ಜೀವನ, ಕಾಡು, ಹಳ್ಳಿ,
ಸುಖ, ದುಃಖ, ಸಂತೋಷ ಮುಂತಾದ
ರೂಪಕ ಒಳಗೊಂಡ ಕ್ರಿಯಾತ್ಮಕ ಸಂವಹನ ನಡೆದಿರಬೇಕು. ತಿಳುವಳಿಕೆ ಇಲ್ಲದೆ ಅಪಹಾಸ್ಯ ಮಾಡುವರಿಗೆ
ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲ. ಸಾಮಾಜಿಕ ಜಾಲ ತಾಣದಲ್ಲಿ ಸಾಹಿತ್ಯದ ಬಗ್ಗೆ ಊಹಾಪೋಹ
ಚರ್ಚೆಯಾಗುತ್ತಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ, ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ ಶೆಟ್ಟಿ, ಪುಟ್ಟೋಡ್ಲು ರಾಘವೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಮುಖಂಡರಾದ ಅಮ್ರಪಾಲಿ ಸುರೇಶ್, ವಿಲಿಯಂ, ಜಯಕರ ಶೆಟ್ಟಿ, ಕಿಸಾನ್ ಸೆಲ್ ಅಧ್ಯಕ್ಷ ಧರ್ಣೇಶ್, ಹಿಂದುಳಿದ ವರ್ಗದ ಅಧ್ಯಕ್ಷರಾದ ರಾಮಚಂದ್ರ ಜನಗಲ್, ಬಸವಾನಿ ಉದಯ್ ಕುಮಾರ್ ಇದ್ದರು.

