ಬಿಸಿಲಿನಲ್ಲಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳು
ತೀರ್ಥಹಳ್ಳಿ ತಾಲ್ಲೂಕಿನ ಮುನ್ನೂರಿನಲ್ಲಿರುವ ಹುಣಸವಳ್ಳಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 15 ದಿನಗಳಿಂದ ವಿದ್ಯಾರ್ಥಿಗಳು ಶಿಕ್ಷಕರು ಬೇಕೆಂದು
ಪ್ರತಿಭಟನೆ ನಡೆಸುತ್ತಿದ್ದಾರೆ. ಸೋಮವಾರ ವಿದ್ಯಾರ್ಥಿಗಳೊಂದಿಗೆ ಪೊಷಕರು ಸೇರಿಕೊಂಡು ಶಾಲೆಗೆ ಜಡಿದು
ಮಧ್ಯಾಹ್ನದ ವರೆಗೂ ಬಿಸಿಲಿನಲ್ಲಿ ಧರಣಿ ನಡೆಸಿದ್ದರು. ಮಧ್ಯಾಹ್ನದ ಬಳಿಕ ಇರುವ ಇಬ್ಬರು ಶಿಕ್ಷಕರು
ಅಲ್ಲಿಂದ ಕಾಲ್ಕೀಳಬೇಕಾದ ಪರಿಸ್ಥಿತಿ ಬಂದಿತು.
ಇಲ್ಲಿ 1 ರಿಂದ 7ನೇ ತರಗತಿ ವರೆಗೆ ಒಟ್ಟು 38 ಮಕ್ಕಳು
ಕಲಿಯುತ್ತಿದ್ದಾರೆ. ಐದು ವರ್ಷದ ಹಿಂದೆ ಕೇವಲ 6 ಮಕ್ಕಳೊಂದಿಗೆ ಮುಚ್ಚುವ ಹಂತದಲ್ಲಿದ್ದ ಶಾಲೆಯನ್ನು
ಅಲ್ಲಿನ ಗ್ರಾಮಸ್ಥರೇ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಪಿ. ಅನಿಲ್ ನೇತೃತ್ವದಲ್ಲಿ ಮುಂದೆ
ನಿಂತು ಪೋಷಕರ ಮನ ಒಲಿಸಿ 36 ಮಕ್ಕಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಅಲ್ಲಿ ಪುಡಾರಿಗಿರಿ
ನಡೆದು ಶಾಲೆಯ ಪುನರುಜ್ಜೀವನಕ್ಕೆ ಶ್ರಮಿಸಿದವರು ದೂರವಾಗಿದ್ದರು. ಈಗ 3 ಮಂದಿ ಶಿಕ್ಷಕರಿದ್ದಾರೆ.
ಅವರಲ್ಲಿ ಓರ್ವ ಶಿಕ್ಷಕಿ ಇಲ್ಲಿಂದ ವರ್ಗಾವಣೆ ಪಡೆಯದೇ ಬೇರೆಡೆ ಕೆಲಸ ಮಾಡುತ್ತಿದ್ದಾರೆ. ಒಂದೋ ಆಕೆ
ಇಲ್ಲಿ ಪಾಠ ಮಾಡಬೇಕು ಇಲ್ಲವೇ ಬದಲಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಖಾಯಂ ಶಿಕ್ಷಕರನ್ನು ಅಲ್ಲಿ ನೇಮಕ
ಮಾಡಬೇಕು ಎಂಬುದು ಪೋಷಕರ ಹಾಗೂ ಎಸ್ ಡಿಎಂಸಿ ಸಮಿತಿಯ ಆಗ್ರಹವಾಗಿದೆ.