ಜೈ ಮೋದಿ ಎಂದು ಹಲ್ಲೆಗೆ ಯತ್ನ
ಬಿಜೆಪಿ ಕಾರ್ಯಕತ್ರರು ಎಂಬ ಗುಮಾನಿ
ರಾಕೇಶ್ ಟಿಕಾಯತ್ |
ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಸೋಮವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಮಸಿ ಎರಚಿ ಹಲ್ಲೆ ನಡೆಸಲು ಯತ್ನಿಸಲಾಗಿದೆ. ಹಸಿರು ಶಾಲು ಧರಿಸಿ ರೈತರ ಸೋಗಿನಲ್ಲಿ ಒಳಗೆ ನುಗ್ಗಿದ ಕಿಡಿಗೇಡಿಗಳು ಜೈ ಮೋದಿ ಎಂದು ಕೂಗಿ ಹಲ್ಲೆಗೆ ಹತ್ನಿಸಿದ ಕಾರಣ ಅವರು ಬಿಜೆಪಿ ಕಾರ್ಯಕರ್ತರಾಗಿರಬಹುದು ಎಂಬ ಸಂದೇಹ ವ್ಯಕ್ತವಾಗಿದೆ. ಮಸಿ ಎರಚಿ ಹಲ್ಲೆಗೆ ಯತ್ನಸಿದಾಕ್ಷಣ ಎಚ್ಚೆತ್ತುಕೊಂಡ ರೈತರು ಪ್ರತಿದಾಳಿ ನಡೆಸಿ ಕಿಡಿಗೇಡಿ ವಿರುದ್ದ ಸರಿಯಾಗಿ ಗೂಸಾ ನೀಡಿ ಅಲ್ಲಿಂದ ಓಡಿಸಿದ್ದಾರೆ.
ಆದರೆ ರಾಷ್ಟ್ರಮಟ್ಟದಲ್ಲಿ ಓರ್ವ
ಪ್ರತಿಷ್ಠಿತ ಹಾಗೂ ಪ್ರಭಾವಿ ರೈತ ಮುಖಂಡನಾಗಿದ್ದು ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ದ ನಿರಂತರ
ಒಂದು ವರ್ಷಗಳ ಕಾಲ ದೆಹಲಿಯಲ್ಲಿ ಹೋರಾಟ ನಡೆಸಿ ಜಗತ್ತಿನ ಗಮನ ಸೆಳೆದಿದ್ದ ರಾಕೇಶ್ ಟಿಕಾಯತ್ ಮೇಲೆ
ಮಸಿ ಎರಚಿ ಹಲ್ಲೆಗೆ ಯತ್ನಿಸಿರುವುದು ರಾಷ್ಟ್ರದಾದ್ಯಂತ ಸುದ್ದಿಯಾಗಿದೆ. ಮೊದಲೇ ಪಠ್ಯ ಪರಿಷ್ಕರಣೆ
ಮತ್ತು ಕುವೆಂಪು ಅವಹೇಳನದಿಂದ ಎದ್ದಿರುವ ಅಸಮಾಧಾನದಿಂದ ಹೈರಾಣಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ನೇತೃತ್ವದ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ.