4 ಲಕ್ಷ ಚೆಕ್ ವಿತರಿಸಿದ ಆರಗ ಜ್ಞಾನೇಂದ್ರ
ಹಳ್ಳಕ್ಕೆ ಬಿದ್ದು ಮೃತಪಟ್ಟ ರೈತ ಕಾರ್ಮಿಕ ಶಂಕರಪ್ಪ
ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವ
ಮೂರು ದಿನದ ಹಿಂದೆ ಮಳೆ ತಂದ ಅವಾಂತರ ಸರಿಪಡಿಸಲು ತೆರಳಿದ್ದ ರೈತ ಕಾರ್ಮಿಕ ಶಂಕರಪ್ಪ ಕುಟುಂಬಕ್ಕೆ ಸಾಂತ್ವಾನ ಹೇಳಿ ಗೃಹಸಚಿವ ಆರಗ ಜ್ಞಾನೇಂದ್ರ 4 ಲಕ್ಷ ರೂಪಾಯಿ ಚೆಕ್ ನೀಡಿದರು.
ರಾಜ್ಯದಲ್ಲಿ ಎರಡು ಮೂರು ದಿನ ಸುರಿದ ಮಳೆ ಕೋಲಾಹಲವನ್ನೇ ಎಬ್ಬಿಸಿದೆ. ಹಿಂದೆಂದೂ ಮೇ ತಿಂಗಳಲ್ಲಿ ಸುರಿಯದ ಮಳೆ ದೊಪ್ಪೆಂದು ಸುರಿದಿದೆ. ಮೇಘಾಸ್ಪೋಟದಿಂದ ಗದ್ದೆಯಲ್ಲಾದ ದುರಂತ ತಪ್ಪಿಸಲು ಹೋದ ಸಂದರ್ಭದಲ್ಲಿ ಮೇಲಿನ ತೂದೂರು ನಿವಾಸಿ ಶಂಕರಪ್ಪ ಗುರುವಾರ ಸಂಜೆ ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದರು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮೃತರ ಕುಟುಂಬಕ್ಕೆ ಪರಿಹಾರ ಸಮೀಕ್ಷೆ ನಡೆಸಿದ್ದರು. ಶನಿವಾರ ಗೃಹಸಚಿವ ಆರಗ ಜ್ಞಾನೇಂದ್ರ ಮೃತರ ಮನೆಗೆ ತೆರಳಿ ಮೃತರ ಪತ್ನಿ, 8ನೇ ತರಗತಿ ಓದುತ್ತಿರುವ ಪುಟ್ಟ ಬಾಲಕನಿಗೆ ಧೈರ್ಯ ತುಂಬಿದರು. ಬಾಲಕನಿಗೆ ಉತ್ತಮ ಶಿಕ್ಷಣ ಕೊಡಿಸಲು ಆತನ ತಾಯಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬೆಜೆಪಿ ಮುಖಂಡ ಆರ್. ಮದನ್, ತೂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧುರಾಜ್ ಹೆಗ್ಡೆ, ತಹಸೀಲ್ದಾರ್ ಡಾ. ಶ್ರೀಪಾದ್, ರಾಜಸ್ವ ನಿರೀಕ್ಷಕ ಮಂಜುನಾಥ್ ಮುಂತಾದವರು ಇದ್ದರು.
Tags:
ಆರಗ