ರಾಕೇಶ್ ಟಿಕಾಯತ್ ಮೇಲೆ ಹಲ್ಲೆ
ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಮಸಿ ಎರಚಿ ಹಲ್ಲೆ ನಡೆದಿದೆ. ಇದನ್ನು ಖಂಡಿಸಿ ಗುರುವಾರ ತೀರ್ಥಹಳ್ಳಿಯ ವಿವಿಧ ಜನಪರ ಸಂಘಟನೆಗಳ ನೇತೃತ್ವದಲ್ಲಿ ತಾಲ್ಲೂಕು ರೈತ ಸಂಘ ಬೃಹತ್ ಪ್ರತಿಭಟನೆ ನಡೆಸುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.ಹಲ್ಲೆ ಖಂಡನಾರ್ಹ. ಆಡಳಿತ ಪಕ್ಷ ಹಾಗೂ ಸರ್ಕಾರಿ
ಪ್ರಯೋಜಿತ ದೌರ್ಜನ್ಯ ಇದಾಗಿದೆ. ಕೋಮು ದೌರ್ಜನ್ಯ, ಸುಳ್ಳು ಚರಿತ್ರೆ ಸೃಷ್ಠಿಸುವ ಪ್ರಯತ್ನ ನಡೆಸಲಾಗಿದೆ.
ಬುದ್ಧ, ಬಸವ, ಅಂಬೇಡ್ಕರ್, ನಾರಾಯಣ
ಗುರು,
ಕುವೆಂಪು ಮುಂತಾದ ಮಹಾನ್ ವ್ಯಕ್ತಿಗಳ ಮೇಲೆ ನಿಂದಿಸುವ ಕೆಲಸದಲ್ಲಿ ಧರ್ಮಾಂಧತೆ ಬೆಳೆದಿದೆ.
ಇದಕ್ಕೆ ನಿದರ್ಶನವಾಗಿ ರೋಹಿತ್
ಚಕ್ರತೀರ್ಥನೆಂಬ ಅಯೋಗ್ಯನ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಶೀಲನ ಸಮಿತಿಯನ್ನು ರಚಿಸಲಾಗಿದೆ
ಎಂದು ಆರೋಪಿಸಿದೆ.
ಸರ್ಕಾರಗಳ ಇಂತಹ ದರಿದ್ರ ನಡವಳಿಕೆ ಖಂಡಿಸುವ ಉದ್ದೇಶದಿಂದ
ಜೂನ್ 2ರ ಗುರುವಾರ ಬೆಳಿಗ್ಗೆ 10:30ಕ್ಕೆ ತೀರ್ಥಹಳ್ಳಿ ತಾಲ್ಲೂಕು ಕಛೇರಿ ಮುಂದೆ ಜನಪರ ಸಂಘಟನೆಗಳ ನೇತೃತ್ದಲ್ಲಿ ರೈತ ಸಂಘ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ರೈತ ಸಂಘ
ತಿಳಿಸಿದೆ.