2 ಲಕ್ಷ ನಗದು ಕಳವು
ತೀರ್ಥಹಳ್ಳಿ: ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಬಂಕ್ ಬಳಿ ನಿಲ್ಲಿಸಿದ್ದ ಸ್ಕೂಟಿಯಿಂದ 2 ಲಕ್ಷ ನಗದು ಕಳ್ಳತನ ಮಾಡಿದ ಪ್ರಕರಣ ಶುಕ್ರವಾರ ನಡೆದಿದೆ. ತಾಲ್ಲೂಕಿನ ಹೆದ್ದೂರು ಸಮೀಪದ ಸಂತೆಕೊಪ್ಪ ಸುಧಾಕರ್ ಡಿಸಿಸಿ ಬ್ಯಾಂಕ್ ನಿಂದ ನಗದು ಮಾಡಿಸಿಟ್ಟಿದ್ದರು.
ಸ್ಕೂಟಿಯಲ್ಲಿ 2 ಲಕ್ಷ ಹಣ ಇಟ್ಟು ಅಂಗಡಿಗೆ ತೆರಳಿದ್ದ ಸಂದರ್ಭದಲ್ಲಿ ಹೆಲ್ಮೆಟ್
ಧರಿಸಿ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ ನಗದು ಕಳವು ಮಾಡಿರುವ ದೃಶ್ಯ ಬಂಕ್ ನ ಸಿಸಿಟಿವಿ ಕ್ಯಾಮರದಲ್ಲಿ
ಸೆರೆಯಾಗಿದೆ. ಈ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.