78 ಕೋಟಿಗೂ ಹೆಚ್ಚಿನ ವಹಿವಾಟು 26 ಲಕ್ಷ ನಿವ್ವಳ ಲಾಭ
ಶೀಘ್ರದಲ್ಲಿ ಚೀಟಿನಿಧಿ, ಸ್ವಂತ ಕಟ್ಟಡ ಘೋಷಣೆ ಮಾಡಿದ ವರ್ತಕ ಸೌಹಾರ್ದ ಸಹಕಾರಿ
ಗ್ರಾಮೀಣ ಭಾಗದ ಸಹಕಾರಿ ಕ್ಷೇತ್ರ ನಿರೀಕ್ಷೆಗೂ ಮೀರಿ ಬೆಳೆದಿದೆ. ಗ್ರಾಹಕರು ಸರಾಗ
ಸೇವೆ ಮತ್ತು ಆಕರ್ಷಕ ಬಡ್ಡಿದರ ಹಾಗೂ ಭದ್ರತಾ ದೃಷ್ಟಿಯಿಂದ ಹೆಚ್ಚು ಸಹಕಾರಿ ಸಂಸ್ಥೆಗಳತ್ತ ಧಾವಿಸುತ್ತಿರುವುದು
ಉತ್ತಮ ಬೆಳವಣಿಗೆಯಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ
ಗೌಡ ಹೇಳಿದ್ದಾರೆ.
ಕಳೆದ ವಾರ ವರ್ತಕರ ಸೌಹಾರ್ದ ಸಹಕಾರಿಯ 9ನೇ ಸರ್ವ ಸದಸ್ಯರ ಮಹಾಸಭೆಯಲ್ಲಿ ಸನ್ಮಾನ
ಸ್ವೀಕರಿಸಿ ಅವರು ಮಾತನಾಡಿದರು.
ವರ್ತಕರ ಸಹಕಾರಿಯ ಅಧ್ಯಕ್ಷ
ಡಾನ್ ರಾಮಣ್ಣ ಶೆಟ್ಟಿ ಮಾತನಾಡಿ, ಸಂಸ್ಥೆ ಆರ್ಥಿಕ ವರ್ಷದಲ್ಲಿ 78.43 ಕೋಟಿ ವ್ಯವಹಾರ ನಡೆಸಿ 26.11 ಲಕ್ಷ
ನಿವ್ವಳ ಲಾಭಗಳಿಸಿದೆ. ಷೇರುದಾರರಿಗೆ ಶೇಕಡಾ 18 ರಷ್ಟು
ಡಿವಿಡೆಂಟ್ ಕೊಡಲು ತೀರ್ಮಾನಿಸಲಾಗಿದೆ. ಅಲ್ಲದೇ ಮರಣನಿಧಿ, ನೂತನ ಶಾಖೆ ಪ್ರಾರಂಭಕ್ಕೆ ಚಿಂತಿಸಲಾಗುತ್ತಿದೆ. ದಶಮಾನೋತ್ಸವ ಸಂದರ್ಭದಲ್ಲಿ
ಡಿಸಿಸಿ ಬ್ಯಾಂಕಿನ ಸಾಲ ಪಡೆದು ಆರ್ಥಿಕ ವಹಿವಾಟು ಹೆಚ್ಚಿಸಿಕೊಳ್ಳುವ ಪ್ರಯತ್ನ
ನಡೆಸುತ್ತಿದ್ದೇವೆ. ಚಿಟ್ ಫಂಡ್ ಆರಂಭಿಸುವ ಗುರಿ ಇದೆ ಎಂದು ತಿಳಿಸಿದರು.
ಹಿರಿಯ ಷೇರುದಾರ ನಾಗರಾಜ್ ಸಭೆ ಉದ್ಘಾಟಿಸಿದರು.
