ದಸರಾದಲ್ಲಿ ಹುಲಿವೇಷಕ್ಕೆ ಹೆಜ್ಜೆ ಹಾಕುತ್ತಿದ್ದ ಕಲಾವಿದ
ಉಡುಪಿಯಲ್ಲಿ ಡಾನ್ಸ್
ಮಾಸ್ಟರ್ ಆಗಿ ಹೊರಹೊಮ್ಮುತ್ತಿದ್ದ ತೀರ್ಥಹಳ್ಳಿಯ ಸೀಬಿನಕೆರೆ ನಿವಾಸಿ ರಾಕೇಶ್ (29) ಮೃತದೇಹ ಅವರ
ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಯಹತ್ಯೆ ಎಂಬ ಊಹೆಗಳು ಇದ್ದು ಸಾವಿಗೆ ನಿಖರವಾದ
ಕಾರಣಗಳು ತಿಳಿದು ಬಂದಿಲ್ಲ.
ರಾಕೇಶ್ ಕಳೆದು
ಮೂರು ವರ್ಷಗಳಿಂದ ತೀರ್ಥಹಳ್ಳಿಯಲ್ಲಿ ನಡೆಯುತ್ತಿದ್ದ ದಸರಾ ಕಾರ್ಯಕ್ರಮದಲ್ಲಿ ಅತ್ಯಂತ ಖುಷಿಯಿಂದ
ಹುಲಿವೇಷ ಹಾಕುವ ಮೂಲಕ ಕಲೆಯನ್ನು ಪೋಷಿಸಿಕೊಂಡು ಬಂದಿದ್ದರು. ಹುಲಿಹೆಜ್ಜೆ ಹಾಕುತ್ತಿದ್ದ ರಾಕಿ ಅನೇಕರ
ಸ್ನೇಹವನ್ನು ಗಳಿಸಿದ್ದರು.
