ಏಕಲವ್ಯ ಪ್ರಶಸ್ತಿ ಪುರಸ್ಕೃತ ಶ್ರೀರಾಮ ಸರ್ಜಾ ಪುತ್ರ
ಮಲೆನಾಡಿನ ಚೆಸ್ ಕ್ರೀಡೆಗೆ ತಾಲೂಕಿನ ಸರ್ಜಾ ಕುಟುಂಬದ ಕೊಡುಗೆ ಅಪಾರವಾದದ್ದು. ಈ ಸರ್ಜಾ ಕುಟುಂಬದ ಮತ್ತೊಂದು ಕುಡಿ ಯು-8 ವಿಭಾಗದಲ್ಲಿ ಚೆಸ್ ವಿಶ್ವ ಚಾಂಪಿಯನ್ ಪಂದ್ಯಾವಳಿಗೆ ಬಾಲ ಪ್ರತಿಭೆಗೆ ತೀರ್ಥಹಳ್ಳಿ ತಾಲೂಕು ಮೂಲದ ಕೆನಡಾ ವಾಸಿ ಧ್ಯೇಯ ಆರ್. ಸರ್ಜಾ ಆಯ್ಕೆ ಆಗಿರುವುದು ಪ್ರತಿಯೊಬ್ಬ ಮಲೆನಾಡಿಗರು ಹೆಮ್ಮೆಪಡುವ ವಿಚಾರವಾಗಿದೆ.
ಹೆಸರಾಂತ ಚೆಸ್ ತರಬೇತುದಾರರು, ಜಿಲ್ಲಾ ಚೆಸ್ ಆಸೋಶಿಯನ್ನಿನ ಸರ್ಜಾ ಚಂದ್ರಕಾಂತ್ ಮಗ ಶ್ರೀರಾಮ ಸರ್ಜಾ ಹಾಗೂ ವಿಜೇತಾ ದಂಪತಿಗಳ ಪುತ್ರನೇ ಈ ಧ್ಯೇಯ ಸರ್ಜಾ. ಈ ಪ್ರತಿಭಾವಂತ ಬಾಲಕನ ತಂದೆ ಹೆಸರಾಂತ ಚೆಸ್ ಆಟಗಾರ ಶ್ರೀರಾಮ ಸರ್ಜಾ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪಡೆದವರು. ಇವರು ಚೆಸ್ ಕ್ರೀಡೆಯ ಸಾಧನೆಗೆ ರಾಜ್ಯ ಸರ್ಕಾರದ ಏಕಲವ್ಯ ಪ್ರಶಸ್ತಿಗೂ ಪಾತ್ರರಾದವರು.
ಪ್ರಸ್ತುತ ಕೆನಡಾದಲ್ಲಿ ವಾಸವಾಗಿರುವ ಶ್ರೀರಾಮ ಸರ್ಜಾ ಪುತ್ರ ಧ್ಯೇಯ ಆರ್ ಸರ್ಜಾ ತಂದೆಯ ಸಾಧನೆಯ ಹಾದಿಯಲ್ಲಿ ಸಾಗಿ ಬರುತ್ತಿದ್ದು U-8 ನಾರ್ತ್ ಅಮೇರಿಕನ್ ಚೆಸ್ ಚಾಂಪಿಯನ್ ಹಾಗೂ ವಿಶ್ವ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿದ್ದು ಸದ್ಯದಲ್ಲೆ ಪಂದ್ಯಾವಳಿ ನಡೆಯಲಿದೆ ಎಂದು ತಿಳಿದುಬಂದಿದೆ.
