ಏಪ್ರಿಲ್ 3ರಂದು ಮೇಳಿಗೆ ಸಮೀಪ ಸಂಭವಿಸಿದ್ದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೇಳಿಗೆ-ಟೆಂಕಬೈಲ್ ನಿವಾಸಿ ಟಿ ಆರ್ ಚಂದ್ರಶೇಖರ (70) ಅವರು ಚಿಕಿತ್ಸೆಗೆ ಸ್ಪಂದಿಸದೇ ಇಂದು ಬೆಳಿಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇವರ ಪಾರ್ಥಿವ ಶರೀರವನ್ನು ಇಂದು ರಾತ್ರಿ 9ಗಂಟೆಗೆ ಸ್ವಗೃಹಕ್ಕೆ ತರಲಿದ್ದು, ನಾಳೆ ಜುಲೈ 9ರ ಬೆಳಿಗ್ಗೆ 9ಗಂಟೆ ಗೆ ಸ್ವಗ್ರಾಮದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಅಳಿಯಂದರು ಮೊಮ್ಮಕ್ಕಳು ಅಪಾರ ಬಂದುಗಳನ್ನು ಅಗಲಿದ್ದಾರೆ.
