ಸ್ಥಳೀಯರು, ಅರಣ್ಯ ಸಿಬ್ಬಂದಿಯಿಂದ ಆನೆ ಕಾವಲು
ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಯದವಳ್ಳಿ ಗ್ರಾಮದ ತಾಟಳ್ಳಿ ಎಂಬಲ್ಲಿ ಗುರುವಾರ ಬೆಳಗ್ಗಿನ ಜಾವ ಕಾಡಾನೆ ಕಾಣಿಸಿಕೊಂಡಿದೆ. ಗುತ್ತಿಎಡೇಹಳ್ಳಿ, ಸರುವಿನಗದ್ದೆ, ಕಾವೇರಿ ಗ್ರಾಮಗಳಲ್ಲಿ ಸಂಚರಿಸಿರುವ ಆನೆ ತಾಟಳ್ಳಿಯಲ್ಲಿದೆ. ಕಾಡಾನೆ ಯಾವ ದಿಕ್ಕಿನ ಕಡೆ ಚಲಿಸಲಿದೆ ಎಂಬ ಬಗ್ಗೆ ಗೊಂದಲಗಳಿವೆ. ಗುರುವಾರ ಅಲ್ಲಿಯೇ ವಿಶ್ರಾಂತಿ ಪಡೆದರೆ ಶುಕ್ರವಾರ ರಾತ್ರಿ ಸಂಚಾರ ನಡೆಯಲಿದೆ. ಕಾಡಾನೆ ಕಾವಲಿಗಾಗಿ ಸ್ಥಳೀಯರು ಗ್ರಾಮದಲ್ಲಿ ಜಮಾಯಿಸಿದ್ದು ಅವರೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಯನ್ನು ಹಿಂದಕ್ಕೆ ಕಳುಹಿಸಲು ಸಿದ್ದತೆ ನಡೆಸುತ್ತಿದ್ದಾರೆ.