ಆಡಿಟ್ ವರದಿಯಲ್ಲಿ
ʼಎʼ ಗ್ರೇಡ್ ಬ್ಯಾಂಕ್ ಎಂಬ ಹೆಗ್ಗಳಿಕೆ
ಜನಸಾಮಾನ್ಯರ ಬ್ಯಾಂಕ್
ಆಗಿದೆ – ಬಸವಾನಿ ವಿಜಯದೇವ್
ತೀರ್ಥಹಳ್ಳಿ ಪ್ರಾಥಮಿಕ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ 84 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿದ್ದು 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹33.72 ಕೋಟಿ ವ್ಯವಹಾರ ನಡೆಸಿದೆ. ಬ್ಯಾಂಕ್ಗೆ ಒಟ್ಟು 1.17 ಕೋಟಿ ರೂಪಾಯಿಗೂ ಮಿಕ್ಕಿ ಲಾಭ ಬಂದಿದೆ ಎಂದು ಭೂ ಬ್ಯಾಂಕ್ ಅಧ್ಯಕ್ಷ ಬಸವಾನಿ ವಿಜಯದೇವ್ ಹೇಳಿದರು.
ಸೋಮವಾರ ಬ್ಯಾಂಕಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದೆ ಭೂ ಮಾಲೀಕರ ಬ್ಯಾಂಕ್ ಎಂಬ ಟೀಕೆ ಇತ್ತು. ಈಗ ಜನಸಾಮಾನ್ಯರ ಬ್ಯಾಂಕ್ ಆಗಿದೆ ಎಂದು ಅಭಿಪ್ರಾಯಪಟ್ಟರು.
ಒಟ್ಟು 5,315 ಸದಸ್ಯ ಷೇರುದಾರರನ್ನು ಹೊಂದಿದ್ದೇವೆ. ಕಳೆದ 18 ವರ್ಷಗಳಿಂದ ಆಡಿಟ್ ತಪಾಸಣೆಯಲ್ಲಿ ಬ್ಯಾಂಕ್ 'ಎ' ಗ್ರೇಡ್ ಪಡೆಯುತ್ತಿದೆ. ಸದಸ್ಯರಿಗೆ ಶೇಕಡಾ 10 ರಷ್ಟು ಡಿವಿಡೆಂಟ್ ನೀಡಲು ತಿರ್ಮಾನಿಸಿದ್ದೇವೆ. ಆರ್ಥಿಕ ವರ್ಷದಲ್ಲಿ ಶೇಕಡ 83.84 ವಸೂಲಾತಿ ಹೊಂದಿದ್ದೇವೆ. ಸಾಲ ಪಡೆದು ಮರುಪಾವತಿ ಮಾಡದ ನಿರಂತರ ಸುಸ್ತಿದಾರ ಸಾಲಗಾರರ ಮೇಲೆ ದಾವೆ ಹೂಡಿದ್ದೇವೆ ಎಂದರು.
ಬಹುತೇಕ ರೈತರಿಗೆ ಸಕಾಲದಲ್ಲಿ ಕೃಷಿ ಚಟುವಟಿಕೆಗೆ ಆರ್ಥಿಕ ಭದ್ರತೆ ನೀಡುತ್ತಿದೆ. ಹೊಸತೋಟ ನಿರ್ಮಿಸಲು, ಹಳೆ ತೋಟ ಅಭಿವೃದ್ಧಿ, ಬೇಲಿ ನಿರ್ಮಾಣ, ಕೊಟ್ಟಿಗೆ ನಿರ್ಮಾಣಕ್ಕೆ ಸಾಲ ನೀಡಿ ಅಗತ್ಯದ ಹಣಕಾಸು ನೆರವು ನೀಡುತ್ತಿದೆ. ಜಿಲ್ಲೆಗೆ ನಮ್ಮ ಬ್ಯಾಂಕ್ ಪ್ರಥಮ ಸ್ಥಾನದಲ್ಲಿದೆ ಎಂದರು.
ರಾಜ್ಯ ಬ್ಯಾಂಕಿನ
ಬೆಳವಣಿಗೆಗೆ ಹಲವು ಪ್ರಾಥಮಿಕ ಬ್ಯಾಂಕುಗಳು ಕೈಜೋಡಿಸಿದ್ದು ತೀರ್ಥಹಳ್ಳಿ ಭೂ ಅಭಿವೃದ್ಧಿ ಬ್ಯಾಂಕ್
ಈ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಥಮ ಸ್ಥಾನದಲ್ಲಿರುವ
ತೀರ್ಥಹಳ್ಳಿ ಬ್ಯಾಂಕ್, ರಾಜ್ಯಮಟ್ಟದಲ್ಲೂ ಅತ್ಯುತ್ತಮ ಬ್ಯಾಂಕ್ಗಳಲ್ಲಿ ಒಂದಾಗಿದೆ. ನಬಾರ್ಡ್
ಪುರಸ್ಕೃತ ಪ್ರಾಥಮಿಕ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ನಿರಂತರ ಉಳಿಸಿಕೊಂಡು
ಬಂದಿದೆ ಎಂದರು.
ಉಪಾಧ್ಯಕ್ಷ ಕೊಡಸಗೊಳ್ಳಿ ಸತೀಶ್, ವ್ಯವಸ್ಥಾಪಕ ಸಂಜಯ್ ಇದ್ದರು.