ಸ್ಥಳಕ್ಕೆ
ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ
ತಾತ್ಕಾಲಿಕ
ನೆರವು ನೀಡಿದ ಗ್ರಾ.ಪಂ. ಅಧ್ಯಕ್ಷ ಬಂಡೆ ವೆಂಕಟೇಶ್
ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿಯ ಮುನ್ನೂರು ಗ್ರಾಮದ ಸಂಪರ್ಕ ರಸ್ತೆ ಗಾಳಿ ಮಳೆಗೆ ಕುಸಿದು ಹೋಗಿದ್ದು 30ಕ್ಕೂ ಹೆಚ್ಚು ಮನೆಗಳಿರುವ ಈ ಹಳ್ಳಿಗೆ ಈಗ ಸಂಪರ್ಕವೇ ಕಡಿತವಾಗುವ ಭೀತಿ ತಲೆದೋರಿದೆ. ಈಗಾಗಲೇ ಯಾವುದೇ 4 ಚಕ್ರದ ವಾಹನಗಳು, ಆಟೋ ಸಹ ಹೋಗದ ಪರಿಸ್ಥಿತಿ ತಲೆದೋರಿದೆ.
ಪರಿಸ್ಥಿತಿಯ ಗಂಭೀರತೆ ತಿಳಿದುಕೊಂಡ ಶಾಸಕ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಅಲ್ಲದೇ ಗ್ರಾಮಸ್ಥರಿಗೆ ತಕ್ಷಣವೇ ನೆರೆ ಪರಿಹಾರ ನಿಧಿಯಿಂದ ರಸ್ತೆ ದುರಸ್ಥಿಗೊಳಿಸಿಕೊಡುವ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಣ್ಣಪ್ಪ, ಕೋಮನೆ ದಿನೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಮುನ್ನೂರು ಜಗನ್ನಾಥ್ ಮುಖಂಡರಾದ ದೇವದಾಸ್, ಸುಧಾಕರ್, ಆದರ್ಶ ಮುತ್ತುಗುಂಡಿ, ಸಂತೋಷ್ ದೇವಾಡಿಗ ಇನ್ನಿತರರು ಜೊತೆಯಲ್ಲಿ ಇದ್ದರು.
ಮೇಲಿನಕುರುವಳ್ಳಿ
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಂಡೆ ವೆಂಕಟೇಶ್ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದು
ಗ್ರಾಮ ಪಂಚಾಯಿತಿ ವತಿಯಿಂದ ಸಾಧ್ಯವಾಗುವ ಎಲ್ಲಾ ನೆರವನ್ನು ನೀಡುವುದಾಗಿ ತಿಳಿಸಿದ್ದಾರಲ್ಲದೇ ತಕ್ಷಣದ
ಉಪಯೋಗಕ್ಕಾಗಿ ಬೋಲ್ಡ್ರಸ್ ಕಲ್ಲುಗಳನ್ನು ತರಿಸಿಕೊಟ್ಟಿದ್ದರು.