ಮಾಳೂರು ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ
ಖಚಿತ ಮಾಹಿತಿ ಮೇರೆಗೆ ಹಸಿ ಅಡಿಕೆ ಕಳ್ಳತನ ಮಾಡುತ್ತಿದ್ದ 4 ಮಂದಿ ಆರೋಪಿಗಳನ್ನು ಮಾಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾತ್ವಿಕ್, ಪ್ರವೀಣ್, ಶಿಶಿರ, ನಿಶಾಂತ್ ಬಂಧಿತ ಆರೋಪಿಗಳು. ಬಂಧಿತರಿಂದ 4 ಕ್ವಿಂಟಾಲ್ ಹಸಿ ಅಡಿಕೆ ಸೇರಿದಂತೆ 2 ಬೈಕ್ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಗಜಾನನ ವಾಮನ ಸುತಾರ, ಸಿಪಿಐ ಶ್ರೀಧರ್, ಪಿಎಸ್ಐ ಶಿವಾನಂದ, ಕ್ರೈಮ್ ಪಿಎಸ್ಐ ಸಿದ್ದಪ್ಪ, ಸಿಬ್ಬಂದಿಗಳಾದ ಸುರಕ್ಷಿತ್, ಸಂತೋಷ್, ಅಭಿಲಾಷ್, ಚೇತನ್, ರಾಮಪ್ಪ, ಲೋಕೇಶ್, ಪುನೀತ್, ಡೈವರ್ ಅಭಿಲಾಷ್ ಇದ್ದರು.
ನಾಲ್ಕು ದಿನದ ಹಿಂದೆ ಮಂಡಗದ್ದೆ ಗ್ರಾಮದ ಪದ್ಮಿನಿ ಎಂಬುವವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.