ಇತ್ತೀಚೆಗೆ ಆಗುಂಬೆ ವಲಯ ಮಟ್ಟದ ಕ್ರೀಡಾಕೂಟವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗರವಳ್ಳಿಯಲ್ಲಿ ಯಶಸ್ವಿಯಾಗಿ ನಡೆಯಿತು. ಈ ಕ್ರೀಡಾಕೂಟದ ಉದ್ಘಾಟನೆಯನ್ನು ತೀರ್ಥಹಳ್ಳಿಯ ಶಾಸಕ ಆರಗ ಜ್ಣಾನೇಂದ್ರ, ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ವೈ.ಗಣೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಚಂದ್ರಪ್ಪ, ಎಸ್ ಡಿಎಮ್ ಸಿ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ರುಬಿನಾ ಕ್ರೀಡಾ ಜ್ಯೋತಿಯನ್ನು ಬೆಳಗುವುದರ ಮೂಲಕ ಉದ್ಘಾಟಿಸಿದರು. ಮೇಗರವಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರು. ಆಗುಂಬೆ ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು. ಸದಸ್ಯರು ಉಪಸ್ಥಿತರಿದ್ದರು.
ಆರಗ ಜ್ಞಾನೇಂದ್ರ ಕ್ರೀಡಾಪಟುಗಳಿಗೆ ಶುಭಾಶಯ ಕೋರುತ್ತಾ, ಪ್ರತಿ ಬಾರಿಯು ಶಿಕ್ಷಣ ಇಲಾಖೆಯು ಮಳೆಗಾಲದಲ್ಲಿಯೇ ಕ್ರೀಡಾಕೂಟವನ್ನು ಹಮ್ಮಿಕೊಳ್ಳುತ್ತದೆ. ಇದರಿಂದ ಮಲೆನಾಡ ಭಾಗದಲ್ಲಿ ಮಳೆ ಇರುವುದರಿಂದ ವಿಧ್ಯಾರ್ಥಿಗಳಿಗೆ ತೊಂದರೆ ಯಾಗುತ್ತದೆ. ನಾನು ಇದರ ಬಗ್ಗೆ ವಿಧಾನ ಸಭೆಯಲ್ಲೂ ಚರ್ಚೆ ಮಾಡಿರುತ್ತೇನೆ. ಮುಂದಿನ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಬೇಕಾದರೆ ಈ ತಿಂಗಳಲ್ಲೇ ಕ್ರೀಡಾಕೂಟ ಆಯೋಜಿಸುವುದು ಅನಿವಾರ್ಯವಾಗಿದೆ ಎಂಬ ಉತ್ತರ ಶಿಕ್ಷಣ ಇಲಾಖೆಯಿಂದ ಬಂದಿದೆ. ಆದಾಗ್ಯೂ ಕ್ರೀಡಾಕೂಟ ಆಯೋಜನೆ ಬಹಳ ಅಚ್ಚುಕಟ್ಟಾಗಿದೆ. ವಿಧ್ಯಾರ್ಥಿಗಳು ಸೋತಾಗ ಕುಗ್ಗದೇ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ. ಸೋಲನ್ನೇ ಗೆಲುವಿಗೆ ಮೆಟ್ಟಿಲಾಗಿಸಿಕೊಳ್ಳಿ.ಗೆದ್ದವರು ಜಿಲ್ಲೆ ರಾಜ್ಯ ಮಟ್ಟಕ್ಕೆ ಹೋಗುವಂತಾಗಲಿ ಎಂದು ಶುಭಹಾರೈಸಿದರು.
ಕ್ಷೇತ್ರಶಿಕ್ಷಣಾಧಿಕಾರಿಗಳಾದ ಗಣೇಶ್.ವೈ ವಿಧ್ಯಾರ್ಥಿಗಳು ಕ್ರೀಡಾಮನೋಭಾವದಿಂದ ಆಟವಾಡಿ, ರೇಫ಼್ರಿಗಳು ತೀರ್ಪುಗಾರರು ನಿಷ್ಪಕ್ಷಪಾತವಾತವಾಗಿ ತೀರ್ಪು ನೀಡಿ ಎಂದು ಕಿವಿಮಾತನ್ನು ಹೇಳಿದರು.
ಕ್ರೀಡಾಕೂಟದಲ್ಲಿ ಹಳೆಯ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷರು ವಿಜೇತ್ ಇನ್ನಿತರರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಜಯಂತಿ ಎನ್.ಕೆ., ಆಗುಂಬೆ ಹೋಬಳಿ ಶಿಕ್ಷಣ ಸಂಯೋಜಕರಾದ ಗಣೇಶ್ ಸಿ.ಆರ್. ಪಿಯಾದ ಆನಂದ್ ಕುಮಾರ್, ನಾಲೂರು ಸಿ ಆರ್ ಪಿ ಸಾದಿಕ್ ಅಹಮದ್, ಪ್ರೌಢಶಾಲಾ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಶಿಕ್ಷಕರು, ನಿವೃತ್ತ ದೈಹಿಕ ಶಿಕ್ಷಣ ಪರೀವೀಕ್ಷಕರಾದ ಧನಂಜಯ, ಕಿರಣ್ ಕುಮಾರ್, ಮೇಗರವಳ್ಳಿ ಪ್ರೌಢಶಾಲಾ ಮುಖ್ಯಶಿಕ್ಷಕರಾದ ದಿವಾಕರ್ ಉಪಸ್ಥಿತರಿದ್ದರು. ಕ್ರೀಡಾಕೂಟಕ್ಕೆ ಹಗಲಿರುಳು ಶ್ರಮಿಸಿದ , ಸಹಕಾರ ನೀಡಿದ ಸರ್ವರನ್ನು ಶಾಲಾಭಿವೃದ್ಧಿ ಸಮಿತಿಯವರು ಸ್ಮರಿಸಿದರು. ಸರ್ವರನ್ನು ಶಿಕ್ಷಕಿ ಪೂರ್ಣಿಮಾ ವಂದಿಸಿದರು.
ಶಿಕ್ಷಕ ಸ್ನೇಹಿ ಶಿಕ್ಷಣಾಧಿಕಾರಿಗಳು
ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್.ವೈ ಶಿಕ್ಷಕ ಸ್ನೇಹಿ, ಸರಳ ಸಜ್ಜನಿಕೆಯ ಸದಾಕ್ರಿಯಾಶೀಲ ವ್ಯಕ್ತಿತ್ವವುಳ್ಳವರು ಎಂಬ ಮಾತು ಅವರು ಬಂದ ಕೆಲವೇ ದಿನಗಳಲ್ಲಿ ಶಿಕ್ಷಕರು ಹಾಗೂ ತೀರ್ಥಹಳ್ಳಿಯ ಜನಮಾನಸದಲ್ಲಿ ಕೇಳಿಬಂದಿದೆ. ಆಲೋಚನೆಯಂತೆ ಉತ್ತಮ ಕಾರ್ಯ ಎಂಬಂತೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಚೇರಿಯಲ್ಲಿ ಶಿಕ್ಷಕರ ಸೇವೆಗೆ ಲಭ್ಯವಿರುವುದು. ಯಾವುದೇ ಪೋಷಕರ ಮಕ್ಕಳ ಶೈಕ್ಷಣಿಕ ವಿಚಾರವಾಗಿ ದೂರವಾಣಿ ಕರೆಗೆ ಸ್ಪಂದಿಸುವುದು. ಆಗಸ್ಟ್ ರಿಂದ ನಡೆಯುತ್ತಿರುವ ಬಹುತೇಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕ್ರೀಡಾಕೂಟವಿರಬಹುದು ಖುದ್ದಾಗಿ ಪಾಲ್ಗೊಂಡು ಸಲಹೆ ಮಾರ್ಗದರ್ಶನ ನೀಡಿರುತ್ತಾರೆ. ಈ ಬಾರಿಯ ಶಿಕ್ಷಕರ ದಿನಾಚರಣೆಯ ಆಯೋಜನೆಯು ಸಹ ಅಚ್ಚುಕಟ್ಟಾಗಿ ನೆರವೇರಿದ್ದು. ಕೆಳಹಂತದ ಅಧಿಕಾರಿ ಸಿಬ್ಬಂದಿ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾವು ಪಾಲಿಸಿ. ಇತರರಿಗೆ ಪಾಲಿಸುವಂತೆ ಹೇಳುವ ಮಾದರಿ ಶಿಕ್ಷಣಾಧಿಕಾರಿಗಳು ಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಇವರಿಂದ ತಾಲೂಕಿನ ಶೈಕ್ಷಣಿಕ ಗುಣಮಟ್ಟ ಹೊಸ ಯೋಜನೆ ಯೋಚನೆಗಳೊಂದಿಗೆ ಎಸ್ ಎಸ್ ಎಲ್ ಸಿ ಯ ಫಲಿತಾಂಶ ವೂ ಇನ್ನೂ ಉತ್ತಮಗೊಳ್ಳಲಿ ಎಂಬುದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರ ಅಶಯವಾಗಿದೆ.