ಗ್ರಾ.ಪಂ. ಸದಸ್ಯರನ್ನು ಕಡೆಗಣಿಸಿದ
ಡಿಆರ್ಎಫ್ಓ
ಒಕ್ಕೂಟದಿಂದ ಎಸಿಎಫ್ಗೆ ದೂರು
ಶೇಡ್ಗಾರು
ಗ್ರಾಮ ಪಂಚಾಯಿತಿ ಸದಸ್ಯರನ್ನು ಕಡೆಗಣಿಸಿದ ಡಿಆರ್ಎಫ್ಓ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು
ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷ ಟಿ.ಜೆ. ಅನಿಲ್ ಬುಧವಾರ ತೀರ್ಥಹಳ್ಳಿಯ ಸಹಾಯಕ
ಅರಣ್ಯ ಸಂರಕ್ಷಣಾಧಿಕಾರಿಗೆ ದೂರು ಸಲ್ಲಿಸಿದರು.
ಶೇಡ್ಗಾರು
ಶ್ರೀ ಸಿದ್ಧಿ ವಿನಾಯಕ ಗ್ರಾಮ ಅರಣ್ಯ ಸಮಿತಿ ಸರ್ವ ಸದಸ್ಯರ ಮಹಾಮಂಡಳಿ ಸಭೆ ಹಾಗೂ ಪುನಶ್ಚೇತನ ತರಬೇತಿ
ಕಾರ್ಯಗಾರ ಮಂಗಳವಾರ ನಡೆದಿರುತ್ತದೆ. ಶೇಡ್ಗಾರು ಪಂಚಾಯಿತಿ ಸದಸ್ಯೆ ಸವಿತಾ ದಿಲೀಪ್ ಅವರನ್ನು ಉದ್ದೇಶ
ಪೂರ್ವಕವಾಗಿ ಸಭೆಗೆ ಆಹ್ವಾನಿಸಿಲ್ಲ. ವಿಚಾರಿಸಿದಾಗ ಡಿಆರ್ಎಫ್ಓ ಉದ್ದಟತನ ತೋರಿದ್ದಾರೆ. ಜನಪ್ರತಿನಿಧಿಯನ್ನು
ಕಡೆಗಣಿಸಿದ ಅಧಿಕಾರಿಯ ವಿರುದ್ಧ 10 ದಿನಗಳೊಳಗೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುತ್ತೇವೆ
ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಶೇಡ್ಗಾರು ಗ್ರಾ.ಪಂ. ಸದಸ್ಯ ಪಣಿರಾಜ್, ಮುಖಂಡರಾದ ಹೆಬ್ಬುಲಿಗೆ ಉಮೇಶ್ ಇದ್ದರು.