ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧಿಸಿದವರಿಗೆ ಗೌರವ
ವಿದ್ಯಾರ್ಥಿಗಳಿಗೆ ಗಣ್ಯರಿಂದ ಶ್ಲಾಘನೆ
ತೂದೂರು ಸರ್ಕಾರಿ ಪ್ರೌಢಶಾಲೆಯ 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ
ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಶಾಲಾಭಿವೃದ್ದಿ ಸಮಿತಿ, ಗ್ರಾಮ ಪಂಚಾಯಿತಿ ವತಿಯಿಂದ
ಸನ್ಮಾನಿಸಿದರು.
ತೂದೂರು ಗ್ರಾ.ಪಂ. ಅಧ್ಯಕ್ಷ ಮಧುರಾಜ್ ಹೆಗ್ಡೆ ಮಾತನಾಡಿ, ಕೋವಿಡ್ ಸಂದರ್ಭದಲ್ಲೂ ಶೇಕಡಾ
100ರ ಫಲಿತಾಂಶ ನೀಡಿದ ವಿದ್ಯಾರ್ಥಿಗಳ ಶ್ರಮಕ್ಕೆ ಶ್ಲಾಘಿಸಿದರು. ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಪೂರಕವಾದ
ವಾತಾವರಣ ಶಾಲೆ ಕಲ್ಪಿಸುತ್ತಿದೆ. ಪಂಚಾಯಿತಿ, ಎಸ್ಡಿಎಂಸಿ ಉತ್ತಮ ಸಹಕಾರ ನೀಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ
ಶಾಲೆಗೆ ಮೊದಲು ಬಂದ ವಿದ್ಯಾರ್ಥಿನಿ ಹೇಮಲತಾಳಿಗೆ 2 ಸಾವಿರ ನಗದು ವಿತರಿಸಿದರು.
ದಾನಿ ಶಶಿಮೋಹನ್ ಮಾತನಾಡಿ, ಪ್ರತಿವರ್ಷ ಎಸ್ಎಸ್ಎಲ್ಸಿ
ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ತಂದೆಯ ಸ್ಮರಣಾರ್ಥ
ಬಹುಮಾನ ನೀಡುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ
ಕವಿರಾಜ್, ಮುಖ್ಯ ಶಿಕ್ಷಕ ಜಯಪ್ಪ ಮಾತನಾಡಿದರು. ವಿದ್ಯಾರ್ಥಿನಿ
ಅಕ್ಷತಾ ಸ್ವಾಗತಿಸಿ, ಖುಷಿ ವಂದಿಸಿ, ಪ್ರೀತಿ ನಿರೂಪಿಸಿದಳು.