ಅಧಿಕ ಬಾರದ ಮರಳು ಸಾಗಿಸುತ್ತಿದ್ದ ಲಾರಿಗಳು ಕುಶಾವತಿಯಲ್ಲಿ ಸೀಜ್

ಅತ್ಯಧಿಕ ಮರಳು ಸಾಗಿಸುತ್ತಿದ್ದ ಲಾರಿ

ಕುಳಾವತಿಯಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು

ಎಪಿಎಂಸಿಯಲ್ಲಿ ಲಾರಿಯ ತೂಕ ಅಳತೆ

ನಿಲ್ಲದ ಆಳ ಗಣಿಗಾರಿಕೆ

ಕ್ರಮಕ್ಕೆ ಮುಂದಾದ ಪೊಲೀಸರು
ಮರಳು ಕ್ವಾರಿಗಳಲ್ಲಿ ಅತೀ ಹೆಚ್ಚು ತೂಕದ ಮರಳು ಸಾಗಾಣೆಯಾಗುತ್ತಿದೆ. ಆಳ ಗಣಿಗಾರಿಕೆ ಮೂಲಕ ಮೇಲಕ್ಕೆತ್ತಿದ ಹಸಿ ಮರಳು ಸಾಗಾಣೆಯಾಗುತ್ತಿದೆ. ಸರ್ಕಾರಕ್ಕೆ ವಂಚಿಸುವ ಇಂತಹ ಪ್ರಕರಣ ದಿನ ನಿತ್ಯ ವರದಿಯಾಗುತ್ತಿದೆ. ಭಾನುವಾರ ಕುಶಾವತಿಯಲ್ಲಿ ಪರಿಶೀಲಿಸಿದ 3 ಲಾರಿಗಳು ಆಂದಿನಿ, ಮಳಲೂರು ಕ್ವಾರಿಗಳಿಂದ ಬಂದಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸಂಜೆಯ ವೇಳೆಗೆ ಅಧಿಕ ಬಾರದ ಮರಳು ಲಾರಿಗಳು ಕುಶಾವತಿ ಮಾರ್ಗವಾಗಿ ಜಿಲ್ಲೆ, ಹೊರ ಜಿಲ್ಲೆಗಳಿಗೆ ತಲುಪುತ್ತಿವೆ. ಭಾನುವಾರ ಬೆಳಗ್ಗೆಯಿಂದ ಬಾರೀ ಪ್ರಮಾಣದ ಮರಳು ಸಾಗಾಣೆಯಾಗಿದ್ದು, ಸಂಜೆ ಮೂರು ಲಾರಿಗಳನ್ನು ಅನುಮಾನದಿಂದ ಪಟ್ಟಣದ ಎಪಿಎಂಸಿ ವೇಯಿಂಗ್ ಮಷಿನ್ ನಲ್ಲಿ ಪರಿಶೀಲಿಸಿದಾಗ 30 ಟನ್ ಗೂ ಹೆಚ್ಚಿನ ತೂಕದ ಲಾರಿ ಸಾಗಿಸುತ್ತಿರುವುದು ಕಂಡು ಬಂದಿದೆ.
ಸರ್ಕಾರದ ನಿಯಮ ಮೀರಿ 3 ಲಾರಿಗಳ ಲೋಡ್ ಮಾಡಲಾಗಿದೆ. ಇದರ ಜೊತೆಗೆ ಜಿಪಿಎಸ್ ವ್ಯವಸ್ಥೆಯಲ್ಲೂ ದೋಷ ಕಂಡುಬಂದಿದೆ.
ಕಳ್ಳ ಸಾಗಾಣೆಯ ಬಹಿರಂಗವಾಗುತ್ತಿದ್ದಂತೆ ಲಾಭಿಗಳು ಆರಂಭವಾಗಿದೆ. ಪೊಲೀಸರು ಕೂಡ ತನಿಖೆ ಆರಂಭಿಸಿದ್ದು, ಕಳ್ಳ ಸಾಗಾಣೆ ಕುರಿತು ಕ್ರಮಕ್ಕೆ ಮುಂದಾಗಿದ್ದಾರೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post