ಪ್ರಶ್ನೆ ಮಾಡುವ
ಎಲ್ಲರನ್ನು ದೇಶದ್ರೋಹಿಗಳು ಎಂದರೆ ಇದು ಪ್ರಜಾಪ್ರಭುತ್ವ ಹೇಗಾಗುತ್ತದೆ
ಸಚಿನ್ ಗರಗ, ರಹಮತ್
ಉಲ್ಲಾ ಅಸಾದಿ ಆಕ್ರೋಶ
ಮೋದಿ ಸರ್ಕಾರ ಭಿನ್ನ
ದನಿಯನ್ನು ದಮನ ಮಾಡಲು ನೋಡುತ್ತಿದೆ. ಸರ್ಕಾರದ ಕಾರ್ಯ ಶೈಲಿಯನ್ನು ಪ್ರಶ್ನೆ ಮಾಡುವವರನ್ನು ಹೀನಾಯವಾಗಿ
ಅದರ ಐಟಿ ಸೆಲ್ ಮತ್ತು ಮಡಿಲ ಮಾಧ್ಯಮಗಳ ಮೂಲಕ ದೇಶ ದ್ರೋಹಿಗಳು ಎಂಬಂತೆ ಚಿತ್ರಿಸುತ್ತಿದೆ. ಮುಸ್ಲಿಮರು
ದನಿಯೆತ್ತಿದರೆ ಪಾಕಿಸ್ತಾನಿ, ಚಿಂತಕರುನಗರ ನಕ್ಸಲ್, ರೈತರನ್ನು ಖಾಲಿಸ್ತಾನಿ. ಹೀಗೆ ಸರ್ಕಾರವನ್ನು
ಟೀಕಿಸುವುದೇ ಅಪರಾಧ ಎಂಬ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಇದು ಖಂಡನಿಯ ಎಂದು ಪಟ್ಟಣ ಪಂಚಾಯತ್
ಮಾಜಿ ಅಧ್ಯಕ್ಷ ರಹಮತ್ ಉಲ್ಲಾ ಆಸಾದಿ ಹೇಳಿದ್ದಾರೆ.
ಇಂದು ತಾಲೂಕು ಕಚೇರಿ
ಎದುರು ತಾಲೂಕು ಅಹಿಂದ ಸಂಘಟನೆ ವತಿಯಿಂದ ದೆಹಲಿ ಜಂತರ್ಮಂತರನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗೆ
ಬೆಂಬಲ ಸೂಚಿಸಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಮಾತಾಡಿದ ಅವರು ಕೇಂದ್ರ ಸರ್ಕಾರ ಮುಗ್ದ ವಿದ್ಯಾರ್ಥಿಗಳ
ವಿರುದ್ಧ ದಮನಕಾರಿ ನೀತಿ ಅನುಸರಿಸುತ್ತಿರುವುದು ಖಂಡನೀಯ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ
ಚಲ್ಲಾಟ ಆಡುತ್ತಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಅಹಿಂದ ಸಂಘಟನೆಯ
ಅಧ್ಯಕ್ಷ ಸಚಿನ್ ಗರಗ ಮಾತನಾಡಿ, ಭಾರತದಲ್ಲಿ ನಂಬಿಕೆಗಳು ಅತಿ ಮುಖ್ಯ. ವಿದ್ಯಾರ್ಥಿ ಸಮೂಹ ದೇಶದ
ಶೈಕ್ಷಣಿಕ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಅದನ್ನು ಪ್ರಶ್ನೆ ಮಾಡಲು ಮುಂದಾದರೆ ಅದನ್ನು
ಸರಿಪಡಿಸುವ ಬದಲು ಪ್ರಶ್ನಿಸುವವರನ್ನು ಹತ್ತಿಕ್ಕುವ ಪ್ರಯತ್ನ ಸರಿಯಲ್ಲ. ಬೇಟಿ ಬಚಾವೋ ಎಂಬುದಾಗಿ
ಹೇಳುವ ಅವರಿಂದ ಹೆಣ್ಣು ಮಕ್ಕಳ ಮೇಲೆ ಲಾಠಿ ಪ್ರಹಾರ ನಡೆದಿದೆ. ಪೊಲೀಸ್ ಅಧಿಕಾರಿಗಳು ತಮ್ಮ ಹೆಸರಿನ
ಬ್ಯಾಡ್ಜ್ ತೆಗೆದು ಲಾಠಿ ಬೀಸುತ್ತಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿದೆಯೇ ಎಂದು ಪ್ರಶ್ನಿಸಿದರು.
ಇರೆಗೋಡು ಶ್ರೀಧರ್ಮೂರ್ತಿ,
ಹಾರೋಗೊಳಿಗೆ ವಿಶ್ವನಾಥ, ಮಂಡಗದ್ದೆ ದಿನೇಶ್, ವರಲಕ್ಷ್ಮೀ, ಬೆಜ್ಜವಳ್ಳಿ ಪುತ್ತಬ್ಬ ಮುಂತಾವರು ಇದ್ದರು.
