ತೀರ್ಥಹಳ್ಳಿ ಸೈನಿಕ ತಾಲ್ಲೂಕು ಮಾಡುವ ಆಕಾಂಕ್ಷೆ

8 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಸುಬ್ರಮಣ್ಯ ಕೊಡಗಿ
ಪ್ರತಿ ವರ್ಷ 250 ಸೈನಿಕರಿಗೆ ತರಬೇತಿ ನೀಡಲು ಸಿದ್ಧತೆ

ಭಾರತೀಯ ಸೇನೆಗೆ ಸೇರಬೇಕೆಂಬ ಹಂಬಲ ಹೊಂದಿದ್ದ ಯುವಕ ಸುಬ್ರಮಣ್ಯ ಕೊಡಗಿ ಇದೀಗ ʼಮಲ್ನಾಡ್ ಕೆರಿಯರ್ ಅಕಾಡೆಮಿʼ ಸೈನಿಕ ತರಬೇತಿ ಶಾಲೆಯೊಂದನ್ನು ತೆರೆದು ಗಮನ ಸೆಳೆಯುತ್ತಿದ್ದಾರೆ. ಕೌಟುಂಬಿಕ ಸಮಸ್ಯೆಯ ಕಾರಣದಿಂದ ಸೈನಿಕನಾಗುವ ಅವಕಾಶ ಕಳೆದುಕೊಂಡ ಸುಬ್ರಮಣ್ಯ ಕೆ.ಆರ್.‌ ಅನೇಕ ಯುವಕರನ್ನು ಸೈನ್ಯಕ್ಕಾಗಿ ಸಜ್ಜುಗೊಳಿಸುವಲ್ಲಿ ನಿರತರಾಗಿದ್ದಾರೆ.

ಎರಡು ವರ್ಷಗಳ ಹಿಂದೆ ಚಿಕ್ಕದಾಗಿ ಹುಟ್ಟಿಕೊಂಡ ಕನಸಿನ ಪ್ರತಿಫಲವಾಗಿ ಅಂದೇ ವರ್ಷ 4 ವಿದ್ಯಾರ್ಥಿಗಳು ಸೈನಿಕರಾದರು. ಇಷ್ಟಕ್ಕೆ ಇದನ್ನು ಬಿಡಬಾರದು ಇನ್ನಷ್ಟು ಯುವಕರು ಭಾರತೀಯ ಸೈನ್ಯಕ್ಕೆ ಸೇರಬೇಕೆಂಬ ಉತ್ಸಾಹದಿಂದ ಕಳೆದ ಒಂದು ವರ್ಷದ ಹಿಂದೆ ಮಲ್ನಾಡ್‌ ಕೆರಿಯರ್‌ ಅಕಾಡೆಮಿ (ಎಂಸಿಎ) ಹುಟ್ಟಿಕೊಂಡಿದೆ. ಅದಾಗುತ್ತಿದ್ದಂತೆ ಪ್ರಸ್ತುತ ಸಾಲಿನಲ್ಲಿ 4 ವಿದ್ಯಾರ್ಥಿಗಳು ಮತ್ತೆ ಸೈನ್ಯಕ್ಕೆ ಆಯ್ಕೆಯಾಗಿದ್ದಾರೆ.

‌ಕೈಮರ-ಹೊಸಳ್ಳಿ ಪ್ರಜ್ವಲ್‌ ಹೆಚ್.ಆರ್., ಜಿಗಳಗೋಡು ಸಾತ್ವಿಕ್‌ ಎಸ್‌, ಹೆಗ್ಗಾರು ಆದಿತ್ಯ ಹೆಚ್.ಎಸ್.‌, ಹೆಗ್ಗಾರು ಪ್ರಜ್ವಲ್‌ ಹೆಚ್.‌ಡಿ. ಆಯ್ಕೆಯಾದ ನಾಲ್ವರು ವಿದ್ಯಾರ್ಥಿಗಳು. ಈ ಸಾಲಿನಲ್ಲಿ ಇದೀಗ 27 ವಿದ್ಯಾರ್ಥಿಗಳು ಸೈನ್ಯಕ್ಕೆ ಸೇರಲು ಸಜ್ಜಾಗುತ್ತಿದ್ದು ತರಬೇತಿ ಪಡೆಯುತ್ತಿದ್ದಾರೆ. ಸುಬ್ರಮಣ್ಯ ಕೆ.ಆರ್.‌ ತೀರ್ಥಹಳ್ಳಿ ತಾಲ್ಲೂಕನ್ನು ಸೈನಿಕ ತಾಲ್ಲೂಕು ಎಂದು ಗುರುತಿಸಿಕೊಳ್ಳಬೇಕು. ದೇಶ ಕಾಯುವ ಕಾಯಕದಲ್ಲಿ ಮಲೆನಾಡಿಗರ ಸಂಖ್ಯೆ ಹೆಚ್ಚಾಗಬೇಕೆಂಬ ಮಹತ್ವಕಾಂಕ್ಷೆಯಿಂದ ತರಬೇತಿ ನೀಡುತ್ತಿದ್ದಾರೆ. ಪ್ರತಿ ವರ್ಷ 250 ಸೈನಿಕರನ್ನು ಸಜ್ಜಗೊಳಿಸಬೇಕೆಂಬ ಆಸೆ ಹೊಂದಿದ್ದಾರೆ.

ಪರೀಕ್ಷೆಯ ಜೊತೆಗೆ ಕಠಿಣವಾದ ದೈಹಿಕ ಪರಿಶ್ರಮ ಹೆಚ್ಚಿಸಿಕೊಳ್ಳಲು ತರಬೇತಿ ನೀಡುತ್ತಿರುವ ಸುಬ್ರಮಣ್ಯ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುತ್ತಿದ್ದಾರೆ. ಅವರ ಕನಸು ಯಶಸ್ವಿಯಾಗಲಿ. ಭಾರತೀಯ ಸೇನೆಯಲ್ಲಿ ತೀರ್ಥಹಳ್ಳಿಯ ಪಾತ್ರ ಹಿರಿದಾಗಲಿ ಎಂದು ನೆಲದಧ್ವನಿ ಬಳಗ ಹಾರೈಸುತ್ತದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post