ಮಾರ್ಚ್ 21 ರಿಂದ
22ರ ವೆರೆಗೆ ಮೂರು ಅತ್ಯುತ್ತಮ ನಾಟಕ ಪ್ರದರ್ಶನ
ರಂಗದಮೇಲೆ ಮಹಾನ್
ಸಮಾಜವಾದಿ ಚಿಂತಕ ಲೋಹಿಯಾರ ರಾಮ ಕೃಷ್ಣ ಶಿವ
ಭಾರತದ ಮಹಾನ್ ಸಮಾಜವಾದಿ
ಚಿಂತಕ ಹಾಗೂ ಮೇರು ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಗುರು ರಾಮಮನೋಹರ ಲೋಹಿಯಾ ಅವರ ಚಿಂತನೆಗಳನ್ನು
ಆಧರಿಸಿದ ರಾಮ – ಕೃಷ್ಣ – ಶಿವ ನಾಟಕ ಮಾರ್ಚ್ 20 ರಂದು ಇಲ್ಲಿನ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ
ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಗಣೇಶ್ ಮಂದಾರ್ತಿ ನಿರ್ದೇಶಿಸಿದ್ದು ಭಾರತದ ಹೆಸರಾಂತ ನಟ ಹಾಗೂ
ಮೂಲತಃ ರಂಗಕರ್ಮಿ ಆಗಿರುವ ಪ್ರಕಾಶ್ ರೈ ನೇತೃತ್ವದ ನಿರ್ದಿಗಂತ ತಂಡ ಅಭಿನಯಿಸಲಿದೆ.
21 ರಂದು ಈಗಾಗಲೇ
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆದಿರುವ ನಟಮಿತ್ರರು ತಂಡದ ಹುಲುಗಪ್ಪ ಕಟ್ಟೀಮನಿ ನಿರ್ದೇಶನದ ‘ಆ
ಊರು ಈ ಊರು” ನಾಟಕದ 15ನೇ ಪ್ರದರ್ಶನವನ್ನು ಪ್ರೇಕ್ಷಕರ ಒತ್ತಾಯದ ಮೇರೆಗೆ ಆಯೋಜಿಸಲಾಗಿದೆ. 22 ರಂದು
ಬೆಂಗಳೂರಿನ ರಾಷ್ಟ್ರೀಯ ನಾಟಕಶಾಲೆಯ ವೀರ್ಣಾ ಶರ್ಮಾ ಭೂಸನೂರುಮಠ ನಿರ್ದೇಶನದ ‘ಈ ಕೆಳಗಿನವರು” ನಾಟಕ
ಪ್ರದರ್ಶನವಾಗಲಿದೆ ಎಲ್ಲಾ ನಾಟಕಗಳು ಪ್ರತಿದಿನ ಸಂಜೆ 6.30ಕ್ಕೆ ಸರಿಯಾಗಿ ಆರಂಭಗೊಳ್ಳಲಿದೆ ಎಂದು
ಮಾಜಿ ರಂಗಾಯಣ ನಿರ್ದೇಶಕ, ನಟಮಿತ್ರರು ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಸಂದೇಶ ಜವಳಿ ಹೇಳಿದ್ದಾರೆ.
ರಂಗ ಯುಗಾದಿ ಹೆಸರಿನಲ್ಲಿ
ಈ ಮೂರು ದಿನಗಳ ನಾಟಕೋತ್ಸವ ಇಲ್ಲಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪ್ರತಿದಿನ ಸಂಜೆ 6.30ಕ್ಕೆ
ನಡೆಯಲಿದೆ. ಯುವಜನತೆಯನ್ನು ರಂಗಭೂಮಿ ಕಡೆಗೆ ಸೆಳೆಯುವ ಪ್ರಯತ್ನವಾಗಿ ಕಾಲೇಜು ವಿದ್ಯಾರ್ಥಿಗಳ ಒಂದು
ತಿಂಗಳ ರಂಗ ಶಿಕ್ಷಣ ಸರ್ಟಿಫಿಕೇಟ್ ಕೋರ್ಸನ್ನು ಪ್ರಾರಂಭಿಸಲಾಗಿದೆ. ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು
ಶಿಬಿರದಲ್ಲಿ ಭಾಗವಹಿಸಿದ್ದಾರೆ. ಪ್ರಸಾದನ, ರಂಗಪರಿಕರ ನಿರ್ಮಾಣ, ರಂಗ ಸಜ್ಜಿಕೆ, ಬೆಳಕಿನ ನಿರ್ವಹಣೆ,
ರಂಗಸಂಗೀತ ತರಬೇತಿ ನೀಡಲಾಗುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ 20 ದಿನಗಳ ಮಕ್ಕಳ ಬೇಸಿಗೆ ಶಿಬಿರ
ಆಯೋಜಿಸಲಾಗಿದೆ ಎಂದರು.
