ಮ್ಯಾಮ್ಕೋಸ್‌ ಭೂ ಖರೀದಿ 5 ರಿಂದ 6 ಕೋಟಿ ಅವ್ಯವಹಾರ?

ಅರ್ಧದಷ್ಟು ಬೆಲೆಗೆ ಭೂಮಿ ಕೊಡಲು ಅಲ್ಲಿನ ರೈತರು ಸಿದ್ಧರಿದ್ದಾರೆ
ತನಿಖೆಗೆ ಕಾಂಗ್ರೆಸ್‌ ಮುಖಂಡ ಅಮ್ರಪಾಲಿ ಸುರೇಶ್‌ ಆಗ್ರಹ

1939ರ ನವೆಂಬರ್‌ 8 ರಂದು ಅಂದಿನ ಜಿಲ್ಲಾಧಿಕಾರಿ ಶೇಷಾದ್ರಿ ವರು ಮಲೆನಾಡಿನ ಅಡಿಕೆ ಬೆಳೆಗಾರರು ಹಾಗು ರೈತರ ಹಿತದೃಷ್ಟಿಯನ್ನು ಕಾಪಾಡುವ ಉದ್ದೇಶದಿಂದ ಮ್ಯಾಮ್ಕೋಸ್ ಸಂಸ್ಥೆ ಪ್ರಾರಂಭಿಸಿದರು. ಕೇವಲ 659 ಸದಸ್ಯರನ್ನು ಹೊಂದಿದ್ದ ಸಂಸ್ಥೆ ರೈತರ, ಅಡಿಕೆ ಬೆಳೆಗಾರರಿಗೆ ಅನುಕೂಲ ಹಾಗೂ ಪಾರದರ್ಶಕ ಆಡಳಿತ ನೀಡುತ್ತಲೆ ಬಂದಿತ್ತು. ಕ್ರಮೇಣ ಈ ಸಂಸ್ಥೆಯಲ್ಲಿ ರಾಜಕೀಯ ಪಕ್ಷ ಹಾಗೂ ರಾಜಕೀಯ ತತ್ವ ಸಿದ್ದಾಂತ ಹೊಂದಿರುವ ಸಂಘಟನೆ ಸಹಕಾರಿ ಹೆಸರಲ್ಲಿ ಆಡಳಿತ ನಡೆಸಲು ಯಶಸ್ವಿಯಾದರು.

ಈಗ ಸಂಸ್ಥೆಯು 36000 ಸಾವಿರಕ್ಕೂ ಅಧಿಕ ಷೇರುದಾರರನ್ನು ಹೊಂದಿದ್ದು ಸಾವಿರಾರು ಕೋಟಿಯ ವ್ಯವಹಾರ ವಹಿವಾಟು ನಡೆಸುತ್ತಿದೆ. ಇದಕ್ಕೆ ಕಾರಣ ಮ್ಯಾಮ್ಕೋಸ್ ಸಂಸ್ಥೆಯ ಮೇಲಿರುವ ರೈತರ ನಂಬಿಕೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಆಡಳಿತ ಮಂಡಳಿ ವಹಿಸಲೇಬೇಕು. ಮಹೇಶ್ ಹುಲ್ಕುಳಿಯವರು ನನಗೆ ತಿಳಿದಂತೆ ದಕ್ಷ ಆಡಳಿತಗಾರರು ಎಂದು ಭಾವಿಸಿದ್ದೇನೆ. ಅವರ ಅರಿವಿಗೆ ಬಂದೋ ಬಾರದೆಯೋ ಕೋಟ್ಯಾಂತರ ರೂಪಾಯಿ ಹಗರಣ ನಡೆದಿದೆ ಎಂದರೆ ಆಶ್ಚರ್ಯವಾಗುತ್ತದೆ.

ಮ್ಯಾಮ್ಕೋಸ್ ಸಂಸ್ಥೆಯ ತೀರ್ಥಹಳ್ಳಿ ಶಾಖೆಗೆಂದು ಕಿತ್ತನೆಗದ್ದೆ ಗ್ರಾಮದಲ್ಲಿ 62000 ಅಡಿ ಜಾಗವನ್ನು ಖಾಸಗಿ ವ್ಯಕ್ತಿಗಳಿಂದ ಪ್ರತಿ ಅಡಿಗೆ 1,150 ರೂ ಗೆ ಖರೀದಿ ಮಾಡಿರುತ್ತಾರೆ. ಕೊಂಡವರು ಹಾಗೂ ಮಾರುವವರು ಶಾಸಕರು ಹಾಗೂ ಸಂಸದರ ಅಪ್ತರಾಗಿದ್ದಾರೆ. ಅವರಿಬ್ಬರು ಅಡಿಕೆ ಬೆಳೆಗಾರರ ಬಗೆಗೆ ಅತೀವ ಕಾಳಜಿ ಹೊಂದಿದ್ದು ರೈತರ ಹಿತಾಸಕ್ತಿಗಾಗಿ ಮುಖ್ಯಮಂತ್ರಿ, ಕೇಂದ್ರ ಮಂತ್ರಿಗಳ ಬಳಿ ನಿಯೋಗದೊಂದಿಗೆ ತೆರಳಿರುತ್ತಾರೆ. ಈಗ ಮ್ಯಾಮ್ಕೋಸ್ ಸಂಸ್ಥೆ ಖರೀದಿಸಿರುವ ಜಾಗದ ಪಕ್ಕದಲ್ಲಿ ಹೈವೇ ಬೈಪಾಸ್ ರಸ್ತೆ ಹಾದು ಹೋಗುವುದು ಅದರಿಂದ ರಸ್ತೆಗೆ ಸುಮಾರು ಅರ್ಧ ಪಾಲು ಜಾಗ ಬಿಟ್ಟು ಕೊಡಬೇಕಾಗಿ ಬರುತ್ತದೆ ಇದರಿಂದ ರೈತರಿಗೆ ಶೇರುದಾರರಿಗೆ ಅನ್ಯಾಯವಾಗುವುದಿಲ್ಲವೇ ಎಂಬ ಪ್ರಶ್ನೆ ನನ್ನದು.

ಅದೇ ಜಾಗದ ಆಸುಪಾಸಿನ ಜಾಗಗಳು ಇದರ ಕಾಲುಭಾಗದ ಮೊತ್ತದಲ್ಲಿ ಖರೀದಿಸಲಾಗಿದೆ. ನಮ್ಮ ಪ್ರಕಾರ ಈ ಜಾಗ ಖರೀದಿ ಪ್ರಕ್ರಿಯೆಯಲ್ಲಿ ಸುಮಾರು 5 ರಿಂದ 6 ಕೋಟಿಗಳಷ್ಟು ಹೆಚ್ಚುವರಿ ಮೊತ್ತ ಪಾವತಿಯಾಗಿದೆ ಎಂದು ಷೇರುದಾರರು ಹಾಗೂ ರೈತರ ಆರೋಪವಾಗಿದೆ. ಅಸುಪಾಸು ಅಡಿಗೆ 250 ರೂಪಾಯಿ ಬೆಲೆ ಬಾಳುವ ಜಾಗವನ್ನು 500 ರೂಪಾಯಿ ಅಡಿಯ ಮೊತ್ತಕ್ಕೆ ಒಟ್ಟು ಐದು ಎಕರೆ ಜಾಗವನ್ನು ತೀರ್ಥಹಳ್ಳಿಯ ಅನೇಕ ಮಂದಿಯು ಕೊಂಡಿದ್ದಾರೆ. ಅದರಲ್ಲಿ ಮ್ಯಾಮ್ಕೋಸ್ ಸಂಸ್ಥೆಗೆ ಸನ್ನಿವಾಸ ಎಂಬ ಹೆಸರಿನ ಸಂಸ್ಥೆ ಮೂಲಕ 1,150 ರೂಪಾಯಿ ಅಡಿಗೆ ಮಾರಾಟ ಮಾಡಿದ್ದು ಇದೇ ಜಾಗದ ಅತಿಸಮೀಪದಲ್ಲಿ ಸುಮಾರು 40 ಅಡಿ ರಸ್ತೆ ಉಳ್ಳ ಭೂ ಪರಿವರ್ತನೆಗೊಂಡ ಜಾಗ ಈಗ ಖರೀದಿಸಿದ ಮೊತ್ತದ ಅರ್ಧದ ಬೆಲೆಗೆ ಮಾರಾಟ ಮಾಡಲು ವ್ಯಕ್ತಿಯೊಬ್ಬರು ಸಿದ್ದರಿದ್ದು ಸಂಸ್ಥೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಹಾಗೂ ಷೇರುದಾರರು ಇದನ್ನು ಗಮನಿಸಿ ಚರ್ಚಿಸಿ ನಿರ್ಧಾರಕ್ಕೆ ಬರಬೇಕಾಗಿ ರೈತರ ಪರವಾಗಿ ವಿನಂತಿಸುತಿದ್ದೇನೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಮ್ಯಾಮ್ಕೋಸ್‌ ಉಪಾಧ್ಯಕ್ಷ ಮಹೇಶ್‌ ಹುಲ್ಕುಳಿ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಬರೆದ ಪತ್ರದಲ್ಲಿ ಅಮ್ರಪಾಲಿ ಸುರೇಶ್ ಆಗ್ರಹಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post